Friday 30 June 2017

GST ರೇಟ್ ಕಾರ್ಡ್: ಏರಿಕೆ – ಇಳಿಕೆ ವಸ್ತುಗಳ ಪಟ್ಟಿ


ಒಂದೇ ದೇಶ ಒಂದೇ ತೆರಿಗೆ ಒಂದೇ ಮಾರುಕಟ್ಟೆಗೆ ದೇಶ ಸಜ್ಜಾಗುತ್ತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಹೊಸ ವ್ಯವಸ್ಥೆಗೆ ಅಡಿಯಿಡಲಿದೆ. ದೇಶದಲ್ಲಿನ ಪ್ರತಿ ವ್ಯಕ್ತಿಯ ಮೇಲೆ GST ಪ್ರಭಾವ ಇರುತ್ತದೆ. ಇದುವರೆಗೆ ವಸ್ತುಗಳ ಮೇಲೆ ವಿಧಿಸುತ್ತಿದ್ದ ತೆರಿಗೆ ವಿಧಾನ ಆಮೂಲಾಗ್ರವಾಗಿ ಬದಲಾಗಲಿದೆ. ಹಾಗಿದ್ದರೆ ಆ ರೇಟು ಈಗ ಹೇಗಿದೆ..ಜುಲೈ ಒಂದರಿಂದ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಆಯಾ ವಸ್ತುಗಳ ಮೇಲೆ ಸದ್ಯಕ್ಕೆ ತೆರಿಗೆ ಎಷ್ಟಿದೆ..GSTಯಲ್ಲಿ ಎಷ್ಟು ಟ್ಯಾಕ್ಸ್ ವಿಧಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ…ನಿತ್ಯ ಬಳಸುವ ಇವು ಕೆಲವು ಮಾತ್ರ. ಒಟ್ಟು 1200 ವಸ್ತುಗಳ ಬೆಲೆ ಬದಲಾಗುತ್ತದೆ.

ಟೀ ಪೌಡರ್: ಸದ್ಯಕ್ಕೆ : 29%, GST ಬಳಿಕ 18% (ಇಳಿಕೆ)

ಕಾಫಿ ಪೌಡರ್: ಸದ್ಯಕ್ಕೆ : 29% GST ಬಳಿಕ 18% (ಇಳಿಕೆ)

ಸಕ್ಕರೆ: ಸದ್ಯಕ್ಕೆ : 10%, GST ಬಳಿಕ 5% (ಇಳಿಕೆ)

ತುಪ್ಪ: ಸದ್ಯಕ್ಕೆ 5%, GST ಬಳಿಕ 12% (ಏರಿಕೆ)

ಬೆಣ್ಣೆ: ಸದ್ಯಕ್ಕೆ 14.5%, GST ಬಳಿಕ 12% (ಇಳಿಕೆ)

ಹೇರ್ ಆಯಿಲ್: ಸದ್ಯಕ್ಕೆ 29%, GST ಬಳಿಕ 18% (ಇಳಿಕೆ)

ಟೂತ್‌ಪೇಸ್ಟ್: ಸದ್ಯಕ್ಕೆ 29%, ಬಳಿಕ 18% (ಇಳಿಕೆ)

ಸೋಪು: ಸದ್ಯಕ್ಕೆ 29%, GST ಬಳಿಕ 18% (ಇಳಿಕೆ)

ಬ್ರಾಂಡೆಡ್ ಅಕ್ಕಿ: ಸದ್ಯಕ್ಕೆ ಇಲ್ಲ, GST ಬಳಿಕ 5% (ಏರಿಕೆ)
(10 ಕೆ.ಜಿ ರೈಸ್ ಬ್ಯಾಗ್ 25 ರೂಪಾಯಿ ಹೆಚ್ಚಾಗಲಿದೆ)

ಚಾಕ್ಲೆಟ್, ಬಿಸ್ಕೆಟ್: ಸದ್ಯಕ್ಕೆ 29%, GST ಬಳಿಕ 18% (ಇಳಿಕೆ)

ಬರ್ತ್ ಡೇ, ಇತರೆ ಕೇಕ್‍ಗಳು: ಸದ್ಯಕ್ಕೆ ಶೇ.29%, GST ಬಳಿಕ 18% (ಇಳಿಕೆ)

ಐಸ್ ಕ್ರೀಮ್ಸ್: ಸದ್ಯಕ್ಕೆ 29%, GST ಬಳಿಕ 18% (ಇಳಿಕೆ)

ಮೊಬೈಲ್ ಫೋನ್ಸ್: ಸದ್ಯಕ್ಕೆ 6%, GST ಬಳಿಕ 12% (ಏರಿಕೆ)

ಕಂಪ್ಯೂಟರ್, ಲ್ಯಾಪ್‌ಟಾಪ್‍ಗಳು: ಸದ್ಯಕ್ಕೆ 6%, GST ಬಳಿಕ 18% (ಏರಿಕೆ)

ಪೀಠೋಪಕರಣಗಳು: ಸದ್ಯಕ್ಕೆ 29%, GST ಬಳಿಕ 12% (ಏರಿಕೆ)

ಆಯುರ್ವೇದ ಔಷಧಿ: ಸದ್ಯಕ್ಕೆ 10%, GST ಬಳಿಕ 12% (ಏರಿಕೆ)

ಬ್ರಾಂಡೆಡ್ ನೂಡಲ್ಸ್: ಶೇ.1ರಷ್ಟು ಹೆಚ್ಚಳವಾಗಲಿದೆ.

ಕೂಲ್ ಡ್ರಿಂಕ್ಸ್: ಶೇ.1ರಷ್ಟು ಹೆಚ್ಚಳವಾಗಲಿದೆ.

ಪಿಜ್ಜಾ, ಬರ್ಗರ್: ಶೇ.3ರಷ್ಟು ಇಳಿಕೆಯಾಗಲಿದೆ. ಸದ್ಯಕ್ಕೆ ರೂ.100 ಇದ್ದರೆ, GST ಬಳಿಕ ರೂ.97 ಆಗಲಿದೆ.

ಚಪ್ಪಲಿ, ಶೂ ಬೆಲೆಗಳಲ್ಲಿನ ಬದಲಾವಣೆ ಹೀಗಿದೆ:

ರೂ.1000 ಮೇಲೆ: ಸದ್ಯಕ್ಕೆ 26.5%, GST ಬಳಿಕ 18% (ಇಳಿಕೆ)
ರೂ.500-100 ನಡುವೆ: ಸದ್ಯಕ್ಕೆ 5%, GST ಬಳಿಕ 5% (ಬದಲಾವಣೆ ಇಲ್ಲ)
ರೂ.500ರ ಒಳಗೆ: ಯಾವುದೇ ಬದಲಾವಣೆ ಇಲ್ಲ


ರೆಡಿಮೇಡ್ ಬಟ್ಟೆ ಬೆಲೆಗಳಲ್ಲಿನ ವ್ಯತ್ಯಾಸ:

ರೂ.1000ಕ್ಕೂ ಅಧಿಕ ಖರೀದಿಸಿದರೆ: ಸದ್ಯಕ್ಕೆ 12%, GST ಬಳಿಕ 4.5% (ಇಳಿಕೆ)
ರೂ.100ದ ಒಳಗೆ ಖರೀದಿಸಿದರೆ: ಸದ್ಯಕ್ಕೆ 5%, GST ಬಳಿಕ 2.5% (ಇಳಿಕೆ)

ಟಿವಿಗಳು: ಸದ್ಯಕ್ಕೆ 26%, GST ಬಳಿಕ 28% (ಏರಿಕೆ)

ವಾಷಿಂಗ್ ಮೆಷಿನ್: ಸದ್ಯಕ್ಕೆ 26%, GST ಬಳಿಕ 28% (ಏರಿಕೆ)

ಫ್ರಿಡ್ಜ್: ಸದ್ಯಕ್ಕೆ 26%, GST ಬಳಿಕ 28% (ಏರಿಕೆ)

ಮೈಕ್ರೋಓವೆನ್: ಸದ್ಯಕ್ಕೆ 26%, GST ಬಳಿಕ 28% (ಏರಿಕೆ)

ವೈದ್ಯ ಉಪಕರಣಗಳು: ಸದ್ಯಕ್ಕೆ 18%, GST ಬಳಿಕ 12% (ಇಳಿಕೆ)

ಸಿಮೆಂಟ್: ಸದ್ಯಕ್ಕೆ 29%, GST ಬಳಿಕ 28% (ಇಳಿಕೆ)

ದೊಡ್ಡ ವಾಹನಗಳು (ಕಮರ್ಷಿಯಲ್): ಸದ್ಯಕ್ಕೆ 30%, GST ಬಳಿಕ 28% (ಇಳಿಕೆ)

SUV ಕಾರುಗಳು: ಸದ್ಯಕ್ಕೆ 55%, GST ಬಳಿಕ 43% (ಇಳಿಕೆ)

ಲಗ್ಜುರಿ ಕಾರುಗಳು: ಸದ್ಯಕ್ಕೆ 49%, GST ಬಳಿಕ 43% (ಇಳಿಕೆ)

ಮೀಡಿಯಂ ಕಾರುಗಳು: ಸದ್ಯಕ್ಕೆ 47%, GST ಬಳಿಕ 43% (ಇಳಿಕೆ)



ಸಣ್ಣಕಾರುಗಳು: ಸದ್ಯಕ್ಕೆ 30%, GST ಬಳಿಕ 29% (ಇಳಿಕೆ)

ಬೈಕ್‌ಗಳು: ಸದ್ಯಕ್ಕೆ 30%, GST ಬಳಿಕ 28% (ಇಳಿಕೆ)

ಜಿ.ಎಸ್.ಟಿ. ರೈತರ ಬೆನ್ನೆಲುಬು... ವೆನಿಲ್ಲಾ ಭಾಸ್ಕರ್.


What is GST?

Goods & Services Tax is a comprehensivemulti-stagedestination-based tax that will be levied on every value addition.
To understand this, we need to understand the concepts under this definition. Let us start with the term ‘Multi-stage’. Now, there are multiple steps an item goes through from manufacture or production to the final sale. Buying of raw materials is the first stage. The second stage is production or manufacture. Then, there is the warehousing of materials. Next, comes the sale of the product to the retailer. And in the final stage, the retailer sells you – the end consumer – the product, completing its life cycle.
So, if we had to look at a pictorial description of the various stages, it would look like:
GST basics
Goods and Services Tax will be levied on each of these stages, which makes it a multi-stage tax. How? We will see that shortly, but before that, let us talk about ‘Value Addition’.
Let us assume that a manufacturer wants to make a shirt. For this he must buy yarn. This gets turned into a shirt after manufacture. So, the value of the yarn is increased when it gets woven into a shirt. Then, the manufacturer sells it to the warehousing agent who attaches labels and tags to each shirt. That is another addition of value after which the warehouse sells it to the retailer who packages each shirt separately and invests in marketing of the shirt thus increasing its value.
Value-addition
GST will be levied on these value additions – the monetary worth added at each stage to achieve the final sale to the end customer.
There is one more term we need to talk about in the definition – Destination-Based. Goods and Services Tax will be levied on all transactions happening during the entire manufacturing chain. Earlier, when a product was manufactured, the centre would levy an Excise Duty on the manufacture, and then the state will add a VAT tax when the item is sold to the next stage in the cycle. Then there would be a VAT at the next point of sale.
So, earlier the pattern of tax levy was like this:
ClearTax GST
Now, Goods and Services Tax will be levied at every point of sale. Assume that the entire manufacture process is happening in Rajasthan and the final point of sale is in Karnataka. Since Goods & Services Tax is levied at the point of consumption, so the state of Rajasthan will get revenue in the manufacturing and warehousing stages, but lose out on the revenue when the product moves out Rajasthan and reaches the end consumer in Karnataka. This means that Karnataka will earn that revenue on the final sale, because it is a destination-based tax and this revenue will be collected at the final point of sale/destination which is Karnataka.
Browse GST articles by Topic

Why is Goods and Services Tax so Important?

So, now that we have defined GST, let us talk about why it will play such a significant role in transforming the current tax structure, and therefore, the economy.
Currently, the Indian tax structure is divided into two – Direct and Indirect Taxes. Direct Taxes are levies where the liability cannot be passed on to someone else. An example of this is Income Tax where you earn the income and you alone are liable to pay the tax on it.
In the case of Indirect Taxes, the liability of the tax can be passed on to someone else. This means that when the shopkeeper must pay VAT on his sale, he can pass on the liability to the customer. So, in effect, the customer pays the price of the item as well as the VAT on it so the shopkeeper can deposit the VAT to the government. This means that the customer must pay not just the price of the product, but he also pays the tax liability, and therefore, he has a higher outlay when he buys an item.
This happens because the shopkeeper has paid a tax when he bought the item from the wholesaler. To recover that amount, as well as to make up for the VAT he must pay to the government, he passes the liability to the customer who has to pay the additional amount. There is currently no other way for the shopkeeper to recover whatever he pays from his own pocket during transactions and therefore, he has no choice but to pass on the liability to the customer.
Goods and Services Tax will address this issue after it is implemented. It has a system of Input Tax Credit which will allow sellers to claim the tax already paid, so that the final liability on the end consumer is decreased.

How does GST work?

A nationwide tax reform cannot function without strict guidelines and provisions. The GST Council has devised a fool proof method of implementing this new tax regime by dividing it into three categories. Wondering how they work? Let our experts explain this to you in detail.
When Goods and Services Tax is implemented, there will be 3 kinds of applicable Goods and Services Taxes:
CGST: where the revenue will be collected by the central government
SGST: where the revenue will be collected by the state governments for intra-state sales
IGST: where the revenue will be collected by the central government for inter-state sales
In most cases, the tax structure under the new regime will be as follows:
TransactionNew RegimeOld RegimeComments
Sale within the stateCGST + SGSTVAT + Central Excise/Service taxRevenue will now be shared between the Centre and the State
Sale to another StateIGSTCentral Sales Tax + Excise/Service TaxThere will only be one type of tax (central) now in case of inter-state sales.

Example

A dealer in Maharashtra sold goods to a consumer in Maharashtra worth Rs. 10,000. The Goods and Services Tax rate is 18% comprising CGST rate of 9% and SGST rate of 9%. In such cases the dealer collects Rs. 1800 and of this amount, Rs. 900 will go to the central government and Rs. 900 will go to the Maharashtra government.
Now, let us assume the dealer in Maharashtra had sold goods to a dealer in Gujarat worth Rs. 10,000. The GST rate is 18% comprising of CGST rate of 9% and SGST rate of 9%. In such case the dealer has to charge Rs. 1800 as IGST. This IGST will go to the Centre. There will no longer be any need to pay CGST and SGST.

Tuesday 27 June 2017

ಹಲವು ತೆರಿಗೆಗಳಿಂದ ಮುಕ್ತಿ ದೇಶಕ್ಕೆ ಸಿಗಲಿದೆ ಶಕ್ತಿ

                  ವಿನೋದ್ ಶೆಟ್ಟಿ. ಅಂಕಣಕಾರರು. 
                        ಶೃಂಗೇರಿ ನ್ಯೂಸ್ ಬ್ಲಾಗ್.


ಸ್ವಾತಂತ್ರ್ಯದ ನಂತರ ದೇಶವು ಒಂದು ಐತಿಹಾಸಕ ತೆರಿಗೆ ಸುಧಾರಣಾ ಕ್ರಮಕ್ಕೆ ಮುಂದಾಗಿದ್ದು ಈ ಸುಧಾರಣೆ ಮುಂದಿನ ದಿನಗಳಲ್ಲಿ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರ ವಹಿಸಲಿದೆ. ಒಂದು ದೇಶ ಒಂದು ತೆರಿಗೆ ಒಂದು ಮಾರುಕಟ್ಟೆ ಎಂಬ ಸೂತ್ರದ ಮೂಲಕ ದೇಶದಾದ್ಯಂತ "ಸರಕು ಮತ್ತು ಸೇವಾ ತೆರಿಗೆ" ಜುಲೈ ಒಂದರಿಂದ ಜಾರಿಗೆ ಬರಲಿದೆ.

ಏನಿದು ಸರಕು ಮತ್ತು ಸೇವಾ ತೆರಿಗೆ (GST) :
ಒಂದು ವಸ್ತುವಿಗೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯ ತೆರಿಗೆ ಪ್ರಮಾಣ ಹಾಗೂ ಹಲವಾರು ತರಹದ ತೆರಿಗೆ ಪಾವತಿಸಬೇಕಿತ್ತು ಈಗ ಜಿ ಎಸ್ ಟಿ ಮೂಲಕ ಒಂದು ವಸ್ತುವಿಗೆ ದೇಶದಾದ್ಯಂತ ಏಕರೂಪವಾದ ತೆರಿಗೆ ಇರಲಿದ್ದು ತೆರಿಗೆ ಪಾವತಿ ಕ್ರಮ ಕೂಡ ಸರಳವಾಗಲಿದೆ. ಹತ್ತು ಹಲವಾರು ತೆರಿಗೆಯ ಮೂಲಕ ಬೇಸತ್ತಿದ್ದ ಜನರಿಗೆ ಸರಳವಾದ ಏಕೀಕೃತ ತೆರಿಗೆ ಪದ್ದತಿಯ ಮೂಲಕ ಅನೂಕೂಲ ಕಲ್ಪಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿದ್ಧವಾಗಿದೆ.

ಜಿ ಎಸ್ ಟಿ ಅನೂಕೂಲಗಳು :
 ೧. ಸರಳವಾದ ತೆರಿಗೆ ಪಾವತಿ ಪದ್ಧತಿ.
೨. ಹಲವಾರು ತೆರಿಗೆಗಳಿಂದ ಮುಕ್ತಿ.
೩. ಉತ್ಪಾದಕರಿಂದ ಗ್ರಾಹಕರವರೆಗೆ ತೆರಿಗೆ ಹೊರೆ     ಕಡಿಮೆ.
೪. ದೇಶದ ಆರ್ಥಿಕ ಶಕ್ತಿಯ ಹೆಚ್ಚಳ.
೫. ತೆರಿಗೆ ವಂಚಕರಿಗೆ ಕಂಟಕ.
೬. ತೆರಿಗೆ ವ್ಯಾಪ್ತಿಗೆ ಹೆಚ್ಚಿನ ಜನರ ಸೇರ್ಪಡೆ.
೭. ಮುಂದಿನ ದಿನಗಳಲ್ಲಿ ತೆರಿಗೆ ಪ್ರಮಾಣ ಗಣನೀಯ ಇಳಿಕೆಗೆ ಸಹಕಾರಿ.
೮. ಹೊಸ ಉದ್ಯಮಗಳ ಸ್ಥಾಪನೆಗೆ ಪ್ರೇರಣೆ.
೯. ಉದ್ಯೋಗ ಸೃಷ್ಟಿ.
೧೦. ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಮಹತ್ವದ ಪಾತ್ರ.

      ಈಗಾಗಲೇ ಭಾರತ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿಯಾಗಿದ್ದು ಜಿ ಎಸ್ ಟಿ ಜಾರಿಯ ನಂತರ ದೇಶದ ಆರ್ಥಿಕ ಪ್ರಗತಿಯಲ್ಲಿ ಇನ್ನಷ್ಟು ವೇಗ ಪಡೆಯಲಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.
       ಭಾರತ ಜಗದ್ಗುರುವಾಗುವುದನ್ನೇ  ಧ್ಯೇಯವಾಗಿಸಿಕೊಂಡು ನಿರಂತರ ಕಾರ್ಯಪ್ರವೃತ್ತವಾಗಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ದೂರ ದೃಷ್ಟಿಯ ಕ್ರಮಗಳು ದೇಶದ ೧೨೫ ಕೋಟಿ ಜನರ ಸಹಕಾರದಿಂದ ಭಾರತವನ್ನು ಜಗದ್ಗುರುವಾಗಿ ನೋಡುವ ದಿನಗಳು ಬಹಳ ದೂರವಿಲ್ಲ ಎಂಬುದಂತು ಸತ್ಯ.

Friday 23 June 2017

ಅಣ್ಣತಮ್ಮಂದಿರಂತೆ ಬದುಕೋಣ - ಕಲ್ಮಕ್ಕಿ ಉಮೇಶ್.




ಭಾಳೆಹೊನ್ನೂರಿನಲ್ಲಿ ಸರ್ವರೂ ಅಣ್ಣತಮ್ಮಂದಿರಂತೆ ಬದುಕೋಣ , ಆಯಾ ಸಮಾಜದ ಮುಖಂಡರುಗಳು ದಾರಿತಪ್ಪುತ್ತಿರುವ ಯುವಕರನ್ನು ಸರಿದಾರಿಗೆ ತರುತ್ತಿರುವುದರಿಂದ ಬಾಳೆಹೊನ್ನೂರಿನಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವಂತಾಗಿದೆ ಎಂದು ವಿಎಸ್ ಎಸ್ ಎನ್ ಅಧ್ಯಕ್ಷರು, ಬಿಜೆಪಿ ಮುಖಂಡರು ಆದ ಕಲ್ಮಕ್ಕಿ ಉಮೇಶ್ ನುಡಿದರು. ಅವರು ಬಾಳೆಹೊನ್ನೂರಿನ ಪೋಲೀಸ್ ಠಾಣೆಯಲ್ಲಿ ರಂಜಾನ್ ಹಬ್ಬದ ನಿಮಿತ್ತ ಕರೆದ ಶಾಂತಿ ಸಭೆಯಲ್ಲಿ ಮಾತನಾಡುತ್ತಿದ್ದರು.  ಸಭೆಯಲ್ಲಿ ನರಾ ಪುರ ಸರ್ಕಲ್ ಇನ್ಸ್ಪೆಕ್ಟರ್, ಬಾಳೆಹೊನ್ನೂರು ಠಾಣಾಧಿಕಾರಿ ರಾಜಶೇಖರ್, ಪಂಚಾಯಿತಿ ಅಧ್ಯಕ್ಷರಾದ ಜುಹೇಬ್,  ಬಿಜೆಪಿ ಜಿಲ್ಲಾ ರೈತಮೋರ್ಚಾ  ಮುಖಂಡರಾದ ಕೆ.ಟಿ.ವೆಂಕಟೇಶ್,  ವಿಶ್ವ ಹಿಂದೂ ಬಜರಂಗದಳ ಜಿಲ್ಲಾ ಉಪಾಧ್ಯಕ್ಷ ಆರ್.ಡಿ.ಮಹೇಂದ್ರ. ಭಿಜೆಪಿಯ ಮುಖಂಡರಾದ ಪ್ರಭಾಕರ್ ಪ್ರಣಸ್ವಿ, ಜಗದೀಶ್ಚಂದ್ರ, ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಯು.ಅಶ್ರಪ್, ತಾಲ್ಲೂಕ್ ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷ ಇಬ್ರಾಹಿಂ ಶಾಪಿ,  ಗ್ರಾಮ ಪಂಚಾಯಿತ್ ಸದಸ್ಯರಾದ ಮಹೇಶ್ ಶೆಟ್ಟಿ,  ಉಪಸ್ಥಿತರಿದ್ದರು

Thursday 22 June 2017

ಶಬರಿಮಲೈ ದ್ವಜಸ್ಥಂಭಕ್ಕೆ ಬಂಗಾರದ ವಾಜಿವಾಹನ




ಕೋಟ್ಯಾಂತರ ಭಕ್ತರ ಆರಾಧ್ಯದೈವ, ಕಲಿಯುಗದವರದ, ಶಬರಿಮಲೈ ಶ್ರೀ  ಅಯ್ಯಪ್ಪಸ್ವಾಮಿಯ ಸನ್ನಿದಾನದಲ್ಲಿ ಪ್ರತಿಷ್ಟಾಪಿಸಿರುವ ದ್ವಜಸ್ಥಂಭದಮೇಲೆ ಆಸೀನರಾಗಲು ಚಿನ್ನದ ವಾಜಿವಾಹನ ವನ್ನು ಬೃಹತ್ ಮೆರವಣಿಗೆ ಯ ಪಾದಯಾತ್ರೆ ಮೂಲಕ ಸನ್ನಿಧಾನವನ್ನು ತಪುಪಿದ್ದು ಚಿನ್ನದ ವಾಜಿವಾಹನ ಇನ್ನು ಮುಂದೆ ಅಯ್ಯಪ್ಪನ ಎದುರಿನ ದ್ವಜಕಂಭದಲ್ಲಿ ವಿರಾಜಮಾನನಾಗಲಿದ್ದಾನೆ.
ವಿಶ್ವಕರ್ಮ ಸಮಾಜದ ಮುಖಂಡ ಕೆ.ಪಿ.ನಂಜುಂಡಿ ಬಿಜೆಪಿಗೆ



ಈ ಕಾಂಗ್ರೇಸ್ ನ ಜಾಯಮಾನವೇ ಹಾಗೆ. ಎಲ್ಲ ಸಮಾಜವನ್ನು ಉದ್ದರಿಸುವೆ ಎಂದು ಹೇಳಿಕೊಳ್ಳುತ್ತ ಅ ಸಮಾಜವನ್ನುಶಾಶ್ವತವಾಗಿ ಹಿಂದುಳಿಸುವ ಷ್ಯಡ್ಯಂತ್ರಕ್ಕೆ ಬೇಸತ್ತು ಕಾಂಗ್ರೇಸಿಗೆ ವಿದಾಯ ಹೇಳುತ್ತಿರುವುದಾಗಿ ವಿಶ್ವ ಕರ್ಮ ಸಮುದಾಯದ ಮುಖಂಡ ಕೆ.ಪಿ ನಂಜುಡಿ ತಿಳಿಸಿದ್ದಾರಲ್ಲದೇ
ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಕೆ.ಪಿ ನಂಜುಂಡಿಯವರು ಶೀಘ್ರದಲ್ಲೇ ಬಿಎಸ್ ವೈ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ.

Wednesday 21 June 2017

ಸಾಲ ಮನ್ನಾ ಎಂಬುದು ಸರ್ಕಾರದ ಸಾಧನೆಯು ಅಲ್ಲ ರೈತರಿಗೆ ಸಂಭ್ರಮವು ಅಲ್ಲ
ವಿನೋದ್ ಶೆಟ್ಟಿ. ನವದೆಹಲಿ. ನ್ಯೂಸ್ ಬ್ಲಾಗ್ ಹವ್ಯಾಸಿ ಬರಹಗಾರರು.

 ದೇಶ ಸ್ವಾತಂತ್ರ್ಯಗೊಂಡು ೭೦ ವರ್ಷದ ನಂತರವೂ ಈ  ದೇಶದ ರೈತ ಸಾಲ ಮನ್ನಕ್ಕಾಗಿ ಸರ್ಕಾರದ ಮುಂದೆ ಕೈ ಚಾಚುವ ಪರಿಸ್ಥಿತಿ ನಿಜಕ್ಕೂ ಶೋಚನೀಯ. ದೇಶ ಆಳಿದ ನಾಯಕರುಗಳಿಗೆ ರೈತರ ವಿಚಾರ ಕೇವಲ ಮತಗಳಿಕೆಗೆ ಸೀಮಿತವಾಯಿತೆ ಹೊರತು ರೈತರನ್ನು ಬಲಿಷ್ಠಗೊಳಿಸಲು ಸಾಧ್ಯವಾಗಲೇ ಇಲ್ಲ.
   ನಮ್ಮದೇ ತೆರಿಗೆ ಹಣವನ್ನು ಸಾಲ ಮನ್ನಕ್ಕಾಗಿ ಬಳಸುವ ಸರ್ಕಾರಗಳು ತಮ್ಮದೇ ಸಾಧನೆ ಎಂಬಂತೆ ಬಿಂಬಿಸಲು ಹೊರಟಿರುವುದು ನಿಜಕ್ಕೂ ಹಾಸ್ಯಸ್ಪದ.
    ಕೇಂದ್ರ ಸರ್ಕಾರ ಬೇವು ಲೇಪಿತ ಯೂರಿಯಾ ಹಾಗು ಮಣ್ಣು ಪರೀಕ್ಷಾ ಕೇಂದ್ರದಂತಹ ಕ್ರಮ ರೈತನಲ್ಲಿ ಆಶಾಭಾವನೆ ಮೂಡಿಸಿರುವುದು ನಿಜ ಇದರೊಂದಿಗೆ ಈ ಕೆಳಗಿನ ಕೆಲವು ಅಂಶಗಳು ಅಳವಡಿಸಿಕೊಂಡು ರೈತನನ್ನು ಸಾಲದಿಂದ ಸಂಪೂರ್ಣ ಮುಕ್ತಿ ಮಾಡಿ ರೈತ ಆತ್ಮಹತ್ಯೆ ಇಲ್ಲದ ಸಶಕ್ತ ರೈತರ ದೇಶ ಇದಾಗಲಿ ಎಂಬುದೇ ಆಶಯ.
೧. ಸರ್ಕಾರದ ಮೂಲಕ ಮಣ್ಣು ಪರೀಕ್ಷಿಸಿ ಯಾವ ಪ್ರದೇಶದಲ್ಲಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ನಿರ್ಧರಿಸಬೇಕು.
೨. ಬೆಳೆ ಬೆಳೆಯಲು ಸರ್ಕಾರದ ಮೂಲಕ ಬೀಜ ಹಾಗು ಇತರ ಸಲಕರಣೆ ನೀಡಬೇಕು.
೩. ಬೆಳೆದ ಬೆಳೆಗೆ ಸರ್ಕಾರವೇ ವೈಜ್ಞಾನಿಕ ಬೆಲೆ ನಿರ್ಧರಿಸಿ ಅದಕ್ಕೆ ಮಾರುಕಟ್ಟೆ ಒದಗಿಸಿ ಮಧ್ಯವರ್ತಿಯಿಂದ ರೈತರನ್ನು ಕಾಪಾಡಬೇಕು.
೪. ಒಂದು ವೇಳೆ ಬೆಳೆ ನಷ್ಟ ಅಥವಾ ಬರದಂತಹ ಸಂದರ್ಭದಲ್ಲಿ ಸರ್ಕಾರವೇ ಪರಿಹಾರ ಆ ವರ್ಷದ ಫಸಲನ್ನು ಅಂದಾಜಿಸಿ ನೀಡಬೇಕು.
೫. ರೈತರ ಸಮೀಕ್ಷೆ ಮಾಡಿ ಪ್ರತೀ ರೈತರಿಗೂ  ಆಧಾರ್ ತರಹದ ಡಿಜಿಟಲ್ ಕಾರ್ಡ್ ನೀಡಿ ಅದರಲ್ಲಿ ರೈತರ ಭೂಮಿ ಅಳತೆ, ಮಣ್ಣಿನ ಗುಣ , ಬೆಳೆಯುವ ಬೆಳೆ, ಆ ರೈತನ ಅವಲಂಬಿತರ ಸಂಖ್ಯೆ, ಇತರ ರೈತನಿಗೆ ಸಂಬಂಧಪಟ್ಟ ಅಂಶಗಳನ್ನು ಒಂದೇ ಡಿಜಿಟಲ್ ಕಾರ್ಡ್ನಲ್ಲಿ ನಮೂದಿಸಬೇಕು.
೬, ಡಿಜಿಟಲ್ ಕಾರ್ಡ್ನ ಆಧಾರದಲ್ಲಿ ರೈತನ ಆರ್ಥಿಕ ಪರಿಸ್ಥಿತಿ ಗುರುತಿಸಿ ರೈತನ ಮಕ್ಕಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ನೆರವಾಗಬೇಕು.
೭. ಡಿಜಿಟಲ್ ಕಾರ್ಡಿನ ಮೂಲಕ ರೈತರ ಮುಖವಾಡ ಹಾಕಿ ರೈತರಿಗೆ ಸಿಗುವ ಸವಲತನ್ನು ದುರುಪಯೋಗಪಡಿಸುವ ಮಂದಿಗೂ ಕಡಿವಾಣ ಹಾಕಬಹುದು.
   ಈ ತರಹದ ಕ್ರಮಗಳು ಈ ದೇಶದ ರೈತನನ್ನು ಸಾಲಗಾರನ ಬದಲು ಸ್ವಾವಲಂಭಿಯನ್ನಾಗಿ ಮಾಡಬಲ್ಲುದು. ಕೊನೆಯದಾಗಿ ನಮಗೆ ಬೇಕಾಗಿರುವುದು ಸಾಲ ಮನ್ನಾ ಮಾಡುವ ನಾಯಕ ಅಥವಾ ಸರ್ಕಾರವಲ್ಲ ನಮಗೆ ಬೇಕಾಗಿರುವುದು ಸಾಲವೇ ಇಲ್ಲದ ರೈತನನ್ನಾಗಿಸುವ ಸರ್ಕಾರ.
50 ಸಾವಿರ ಸಾಲಮನ್ನ.. ಯಡೆಯೂರಪ್ಪನವರ ಹೋರಾಟಕ್ಕೆ ಸಂದ ಜಯ -   ವೆನಿಲ್ಲಾ ಭಾಸ್ಕರ್..



ರಾಜ್ಯದ  ರೈತ ನಾಯಕ ಬಿ.ಎಸ್ ಯಡೆಯೂರಪ್ಪನವರ ರಾಜ್ಯ ಬರಪರಿಹಾರ ಪ್ರವಾಸ ಹಾಗೂ ಮೊನ್ನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನಲ್ಲಿ  ರಾಜ್ಯ ಸರ್ಕಾರದ ವಿರುದ್ದ ಗುಡುಗಿ ರೈತರ ನೆರವಿಗೆ ರಾಜ್ಯ ಸರ್ಕಾರ ಬಾರದಿದ್ದಲ್ಲಿ ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗುವುದೆಂಬ ಎಚ್ಚರಿಕೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ 50 ಸಾವಿರ ಸಾಲಮನ್ನಾ ಮಾಡಿದ್ದು ಈ ಮೊತ್ತವನ್ನು ಕನಿಷ್ಟ 2 ಲಕ್ಷಕ್ಕೆ ಏರಿಕೆ ಮಾಡಬೇಕೆಂದು ನರಾಪುರ  ಬಿಜೆಪಿ ತಾಲ್ಲೂಕು ಅಧ್ಯಕ್ಷ ವೆನಿಲ್ಲಾ ಭಾಸ್ಕರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬ್ಲಾಗ್ ಮಾತನಾಡುತ್ತ ಕೇವಲ ಸಹಕಾರಿ ಸಾಲಮಾತ್ರವಲ್ಲದೇ ರಾಷ್ಟ್ರೀಕೃತ ಬ್ಯಾಂಕಿನ ಸಂಪೂರ್ಣ ಸಾಲಮನ್ನ ವನ್ನು ಸರ್ಕಾರ ಮಾಡಿದರೆ ರೈತರ ಆತ್ಮಹತ್ಯೆ ತಡೆಗಟ್ಟಿ ರೈತರ ರಕ್ಷಣೆ ಮಾಡಬಹುದೆಂದು ಅಭಿಪ್ರಾಯ ಪಟ್ಟಿದ್ದಾರೆ.

Monday 19 June 2017

ಶ್ರೀ ರಾಮ್ ನಾಥ್ ಕೋವಿಂದ್ ಎನ್ ಡಿ ಎ ರಾಷ್ಟ್ರಪತಿ ಅಭ್ಯರ್ಥಿ... ಪರಿಶಿಷ್ಠ ಜಾತಿಯ ಅಭ್ಯರ್ಥಿ....
Sri Ram Nath Kovind NDA President Candidate



Ram Nath Kovind (born on 1 October 1945, Village Paraunkh,Tehsil Derapur District Kanpur Dehat) is a current Governor of Bihar. Kovind is a politician from the Bharatiya Janata Party-BJP.[1][2] He was elected to Rajya Sabha from state of Uttar Pradesh during the two terms of 1994-2000 and 2000-2006. He is an advocate by profession and practices in Delhi.[3][4]

Rama Nath Kovind
Governor of Bihar
Incumbent
Assumed office
16 August 2015
Preceded by Keshari Nath Tripathi
Member of Parliament
In office
1994 - 2006
Personal details
Born 1 October 1945 (age 71)
Paraunkh, Derapur, Kanpur Dehat district
Religion Hindu
On June 19, 2017, BJP president Amit Shah declared him the NDA candidate for the post of Indian President. [5]

He is a former President of the BJP Dalit Morcha (1998-2002) and President of the All-India Koli Samaj.[6] He also served as national spokesperson of the party. On 8 August 2015 the President of India appointed him the Governor of Bihar.[7]
ಭಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ವೈ ಸಮ್ಮುಖದಲ್ಲಿ  ಕಲ್ಮಕ್ಕಿ ಉಮೇಶ್ ಬಿಜೆಪಿಗೆ ಸೇರ್ಪಡೆ...


ದಿನಾಂಕ 19.6.2017 ರಂದು ಕಡೂರಿನಲ್ಲಿ ನೆಡೆದ ಪ್ರಮುಖ ಕಾರ್ಯಕರ್ತರ ಜಿಲ್ಲಾ ಸಮಾವೇಶದಲ್ಲಿ ಬಾಳೆಹೊನ್ನೂರಿನ ಪ್ರಮುಖ ಒಕ್ಕಲಿಗ ಮುಖಂಡ , ವಿಎಸ್ ಎಸ್ ಎನ್ ಅಧ್ಯಕ್ಷ ಕಲ್ಮಕ್ಕಿ ಉಮೇಶ್ ರವರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು. ಈ ಸಂಧರ್ಭದಲ್ಲಿ ದಲಿತ ಸಂಘರ್ಷಸಮಿತಿಯ ಜಿಲ್ಲಾ ಮುಖಂಡರಾದ ಕೆ.ಕೆ.ಬಾಬು, ಹಾಗೂ ಬಾಳೆಹೊನ್ನೂರಿನ ಇನ್ನೋರ್ವ ಕಾಂಗ್ರೇಸ್ ಮುಖಂಡ ಬಿ.ಜಿ ನಾರಾಯಣ್ ಬನ್ನೂರು ಇವರು ಸಹಸ್ರಾರು ಕಾರ್ಯಕರ್ತರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂಧರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಶಾಸಕರು ಆದಂತ ಶ್ರೀ ಡಿ.ಎನ್.ಜೀವರಾಜ್ ಸಂಸದೆ ಶೋಭಾಕರಂದ್ಲಾಜೆ,  ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್  ಹಾಗೂ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.

Sunday 18 June 2017

ಬಾಳೆಹೊನ್ನೂರಿನಲ್ಲಿ ವ್ಯಾಪಿಸಿರುವ ಲೂಡೋ ಆಟ....



ಇಸ್ಪೀಟ್ ಅಡ್ಡೆಗಳಮೇಲೆ ಪೋಲಿಸರ ಬಿಗಿಕ್ರಮದಿಂದಾಗಿ ಇಸ್ಪೀಟ್ ದಂದೆಕೋರರು ಈಗ ಹೊಸದಾಗಿ ಕಂಡು ಹಿಡಿದುಕೊಂಡಿರುವ ಆಟ ಈ ಲೂಡೋ..
ಇದೊಂದು ಆಟ ಈಗ ಮನೆ ಮಠಗಳನ್ನು ಮಾರುವ ಸ್ಥಿತಿಗೆ ಕೆಲವರನ್ನು ತಂದುನಿಲ್ಲಿಸಿದ್ದು ಪೋಲಿಸರ ಕಣ್ಗಾವಲನ್ನು ತಪ್ಪಿಸಿ ಈ ಆಟದ ದಂದೆ ಜೋರದ ಸದ್ದುಮಾಡುತ್ತಿದೆ. ಹಾಗಾಗಿ ಈ ಹಿಂದೆ ಇಸ್ಪೀಟ್  ಕೇಸ್ ನಲ್ಲಿ ಸಿಕ್ಕಿರುವ ಜಾಡು ಹಿಡಿದರೆ ಈ ಲೂಡೋ ಅಡ್ಡೆ ಗಳನ್ನು ಸಫೂರ್ಣ ನಿರ್ನಾಮಗೊಳಿಸಬಹುದು. ಈ ಬಗ್ಗೆ ಸಾರ್ವಜನಿಕರ ಸಹಾಯವೂ ಪೋಲಿಸರಿಗೆ ಅಗತ್ಯವಿದ್ದು ಈ ರೀತಿಯ ಆಟ ನೆಡೆಯುವ ಬಗ್ಗೆ ಮಾಹಿತಿ ಇದ್ದರೆ ಕೂಡಲೇ ಈ ಬಗ್ಗೆ ಸ್ಥಳಿಯ ಠಾಣೆಗೆ ತಿಳಿಸುವ ಅಗತ್ಯತೆ ಇದೆ ಎಂಬುದು ಬ್ಲಾಗ್ ನ ಅಭಿಪ್ರಾಯವಾಗಿದ್ದು. ಸ್ಥಳಿಯ ಠಾಣಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವರೆಂಬ ಅನಿಸಿಕೆ ಬ್ಲಾಗ್ ನದ್ದು.
ಕಲ್ಮಕ್ಕಿ ಉಮೇಶ್ ಬಿ.ಜೆ.ಪಿ ಗೆ ಸೇರ್ಪಡೆ



ಬಾಳೆಹೊನ್ನೂರಿನ ವಿ.ಎಸ್.ಎಸ್.ಎನ್ ಅಧ್ಯಕ್ಷರು, ಗ್ರಾಮಪಂಚಾಯಿತಿ ಸದಸ್ಯರು, ವಿದ್ಯಾಗಣಪತಿ ಸೇವಾ ಸಮಿತಿಯ ಮಾಜಿ ಅದ್ಯಕ್ಷರು ಬಾಳೆಹೊನ್ನೂರಿನ  ಪ್ರಮುಖ ವಕ್ಕಲಿಗ ರಾಜಕೀಯ ಧುರೀಣರು ಆದಂತ ಕಲ್ಮಕ್ಕಿ ಉಮೇಶ್ ರವರು ಬಿ.ಜೆ.ಪಿ ರಾಜ್ಯಾಧ್ಯಕ್ಷ ಸನ್ಮಾನ್ಯ ಬಿ.ಎಸ್ ಯಡೆಯೂರಪ್ಪನವರ ಸಮ್ಮುಖದಲ್ಲಿ ಕಡೂರಿನಲ್ಲಿ ದಿನಾಂಕ 19.06.2017 ರಂದು ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆಂದು ಬಿ.ಜೆ.ಪಿ ತಾಲ್ಲೂಕ್ ಅದ್ಯಕ್ಷ  ವೆನಿಲ್ಲಾ ಭಾಸ್ಕರ್ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮರಳಿಗೂಡಿಗೆ.......

ಎಸ್ ಕಲ್ಮಕ್ಕಿ ಉಮೇಶ್ ಅವರೊಂದು ದೈತ್ಯಶಕ್ತಿ. ಯಾವುದಾದರೊಂದು ವಿಚಾರವನ್ನು ಕೈಗೆತ್ತಿಕೊಂಡರೆ ಅದನ್ನು ಸಂಪೂರ್ಣ ತೀರ್ಮಾನವಾಗುವವರೆಗೂ ಕೈಬಿಡದ ಅಪ್ರತಿಮ ಜನಸೇವಕ. ಈ ಹಿಂದೆ ಬಿಜೆಪಿಯಲ್ಲಿಯೇ ಇದ್ದು ಕಾರಣಾಂತರದಿಂದ ಕಾಂಗ್ರೇಸ್ ಗೆ ಸೇರ್ಪಡೆಗೊಂಡಿದ್ದ ಅವರು ಕಾಂಗ್ರೇಸ್ ನಲ್ಲಿಕೇವಲ ವೈಯುಕ್ತಿಕತೆ ತಾಂಡವವಾಡುತ್ತಿದ್ದು ಅಲ್ಲಿರುವ ಗುಂಪುಗಾರಿಕೆಗೆ ಬೇಸತ್ತು ಹಾಗೂ ಜೀವರಾಜ್ ರವರ ಜನಪರ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆಂದು ಪತ್ರಿಕೆಗೆ ತಿಳಿಸಿದ್ದಾರೆ.

ಶೃಂಗೇರಿ ಕಾಂಗ್ರೇಸ್ ಒಡೆದಮನೆಯಂತಾಗಿದೆ.


ಬ್ಲಾಗ್ ನೊಂದಿಗೆ ಮಾತನಾಡಿದ ಕಲ್ಮಕ್ಕಿ ಉಮೇಶ್ ಕಾಂಗ್ರೇಸ್ ಒಡೆದ ಮನೆಯಂತಾಗಿದ್ದು ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿರುವಂತೆ ಕಂಡುಬಂದರೂ ಒಳಗಡೆ ಯಾವುದು ಸರಿ ಇಲ್ಲ ನಾಯಕರುಗಳಲ್ಲಿ ಒಗ್ಗಟ್ಟು ಇಲ್ಲದೇ ಅಲ್ಲಿರುವ ಕಾಂಗ್ರೇಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮುಂದಿನದಿನಗಳಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದು ಮುಂದಿನ ದಿನಗಳಲ್ಲಿ ವಲಸೆ ಪರ್ವ ಆರಂಭವಾಗಲಿದ್ದು ಜೀವರಾಜ್ ರವರ ನಾಲ್ಕನೆ ಗೆಲುವು ಶತಸಿದ್ಧ,  ಜೀವರಾಜ್ ಮುಂದಿನ ಚುನಾವಣೆಯಲ್ಲಿ 20ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವುಸಾಧಿಸಲಿದ್ದಾರೆ ಎಂದು ಭವಿಷ್ಯನುಡಿದರು.

ಜೆ.ಡಿ.ಎಸ್ ಅನ್ನು ಯಾರು ನಂಬೊಲ್ಲ..


ಜೆಡಿಎಸ್ ಮಾಜಿ ಮಂತ್ರಿ ಗೋವಿಂದೇಗೌಡರ ಪುತ್ರ ವೆಂಕಟೇಶ್ ರವರನ್ನು ಕಣಕ್ಕಿಳಿಸಿದರು ಆ ಪಕ್ಷವನ್ನು ಯಾರು ನಂಬುವ ಸ್ಥಿತಿಯಲ್ಲಿ ಇಲ್ಲ..  ಗೋವಿಂದೇ ಗೌಡರಂತ ನಾಯಕರ ರಾಜಕೀಯ ಇಚ್ಛಾಶಕ್ತಿಯನ್ನು ಜನತೆ ಈಗ ಡಿ.ಎನ್.ಜೀವರಾಜ್ ರವರಲ್ಲಿ ಕಾಣುತ್ತಿದ್ದು   ಜೀವರಾಜ್ ನೇತೃತ್ವದಲ್ಲೇ ಜನತೆ ಈ ಕ್ಷೇತ್ರದ ಅಭಿವೃದ್ಧಿಯನ್ನು ಕಾಣುತ್ತಿದ್ದು ಅದನ್ನು ಮುಂದಿನ ಚುನಾವಣೆಯಲ್ಲಿ ಅಪಾರ ಸಂಖ್ಯೆಯಲ್ಲಿ ಬೆಂಬಲಿಸಿ ಅದನ್ನು ಸಾಭೀತು ಪಡಸಲಿದ್ದಾರೆ ಎಂದು ನುಡಿದರು.

Friday 16 June 2017

ಮೋದಿ ಸರ್ಕಾರಕ್ಕೆ ದೊಡ್ಡ ಜಯ...... ಕಾಂಗ್ರೇಸ್ ಗೆ ಜೈಲುಭಾಗ್ಯ



ಕಪ್ಪು ಹಣದ ವಿರುದ್ಧ ಹೋರಾಟ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ದೊಡ್ಡ ಜಯ ದೊರೆತಿದ್ದು, ಸ್ವಿಸ್​ ಬ್ಯಾಂಕ್​ಗಳ ಖಾತೆದಾರರ ಮಾಹಿತಿ ನೀಡಲು ಸ್ವಿಜರ್​ಲೆಂಡ್​ ಒಪ್ಪಿಗೆ ಸೂಚಿಸಿದೆ.ಈ ಮಾಹಿತಿಯನ್ನು ಹೊರಗೆ ಬರದಂತೆ ತಡೆಯುತ್ತಿದ್ದ ಕಾಂಗ್ರೇಸ್ ನ ಕೆಲ ಶಕ್ತಿಗಳ ಹೋರಾಟಕ್ಕೆ ಹಿನ್ನೆಡೆಯಾಗಿದ್ದು. ಜೈಲುಭಾಗ್ಯ ಯೋಜನೆ ಸಿದ್ದಪಡಿಸುವಂತೆ ಹೈಕಮಾಂಡ್ ಸೂಚಿಸಬಹುದೆಂದು ಜನತೆ  ಮಾತಡುತ್ತಿದ್ದಾರೆ.

Thursday 15 June 2017

ಕಾಂಗ್ರೇಸ್ ನ ಸೋಲಿನ ದಿನಗಳು ಆರಂಭ....



ಎಸ್ ನಿಮಗೆ ಈ ನ್ಯೂಸ್ ಅಘಾತವೆನಿಸುವುದಿಲ್ಲ ಕಾರಣ ಇದೆಲ್ಲವನ್ನೂ ಕರ್ನಾಟಕದ ಜನತೆ ನಿರಿಕ್ಷೆ ಮಾಡಿರುವ ವಿಚಾರವೇ....
ಹೌದು ಈಗ ಸದ್ಯ ಚಾಲ್ತಿಯಲ್ಲಿರುವ ಕರ್ನಾಟಕದ ಹಗರಣ ಜಂತಕಲ್ ಮೈನಿಂಗ್ ಹಗರಣ ದಲ್ಲಿ ಕುಮಾರಸ್ವಾಮಿಯನ್ನು ಸಿಲುಕಿಸಿದ ಕಾಂಗ್ರೇಸ್  ಉಗ್ರಪ್ಪನವರನ್ನು ಮುಂದೆ ಬಿಟ್ಟುಕೊಂಡು ಡಿ.ಎಸ್ ಶಂಕರಮೂರ್ತಿವಿರುದ್ದ ಅವಿಶ್ವಾಸ ನಿರ್ಣಯ ತಂದುಬಿಟ್ಟರು. ಬಿಜೆಪಿ ಜೆಡಿಎಸ್ ಬೆಂಬಲದೊಂದಿಗೆ ಸಭಾಪತಿಯಾಗಿದ್ದ ಶಂಕರಮೂರ್ತಿ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದಾಗಲೇ ನೆಡೆದಿದ್ದು ದಿ ಅಲ್ಟಿ ಮೇಟ್ ಕ್ಲೈಮ್ಯಾಕ್ಸ್.....
ಕಾಂಗ್ರೇಸ್ ನ ಕುತಂತ್ರ ಅರಿತ ಕುಮಾರಸ್ವಾಮಿ.
ಎಸ್ ಯಾವಾಗ ಕಾಂಗ್ರೇಸ್ ನ ಕುತಂತ್ರ ಅರಿತ ಕುಮಾರಸ್ವಾಮಿ ಟ್ರಿಗರ್ ಆದರೂ ಮುಂದೆ ಕರ್ನಾಟಕಕ್ಕೆ ಅಪ್ಪಳಿಸಲಿರುವ ಮೋದಿ ಅಲೆಯಲ್ಲಿ ಕೊಚ್ಚಿಹೋಗುವ ಬದಲು ಅಲೆಯೊಂದಿಗೆ ದಡಸೇರುವುದು ಒಳ್ಳೆಯದು ಎಂದು ಶಂಕರಮೂರ್ತಿಯವರನ್ನು ಬೆಂಬಲಿಸಿರುವುದು ಕಾಂಗ್ರೇಸ್ ಗೆ ಮರ್ಮಾಘಾತ ನೀಡಿದೆ.
ಇನ್ನೂ ಮುಂದಿನ ದಿನಗಳು ಕಾಂಗ್ರೇಸ್ ಗೆ ಕೆಟ್ಟದಿನಗಳು ಆರಂಭ ಎಂದು ಜನತೆ ಮಾತನಾಡುತ್ತಿದ್ದು ಇನ್ನೂ ವಲಸೆ ಪರ್ವ  ಆರಂಭವಾಗಲಿದೆ.
ಅಡಕೆಗೆ  ಬೆಂಬಲ ಬೆಲೆ ಮತ್ತು ಅಮದುಸುಂಕ ಏರಿಕೆಯಾಗಬೇಕೆಂದು ಜೀವರಾಜ್ ಹಟಹಿಡಿದು ಕೆಲಸ ಮಾಡಿಸಿಕೊಂಡರು- ಕೇಂದ್ರಸಚಿವೆ ನಿರ್ಮಲ ಸೀತಾರಾಮನ್


ಕೇಂದ್ರವಾಣಿಜ್ಯ ಸಚಿವೆ ನಿರ್ಮಲಸೀತಾರಾಮನ್ ರವರು ಬಾಳೆಹೊನ್ನೂರಿನ ಬಿ.ಜೆ.ಪಿ ಕಾರ್ಯಾಲಯಕ್ಕೆ ಆಗಮಿಸಿದಾಗ ಬ್ಲಾಗ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಈ ರೀತಿ ನುಡಿದರು.  ಇಂದು ಅಡಕೆ ಬೆಳೆಗಾರರು, ರಬ್ಬರ್ ಬೆಳೆಗಾರರ ಸಂಘದಿಂದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು ಶಾಸಕ ಜೀವರಾಜ್  ಆಡಕೆಗೆ ಬೆಂಬಲ ಬೆಲೆ ಮತ್ತು ಅಮದು ಸುಂಕ ಏರಿಕೆಯಾಗಬೇಕೆಂದು ನನ್ನೊಂದಿಗೆ ಹಟಮಾಡಿ ಕೆಲಸಮಾಡಿಸಿಕೊಂಡರು. ಇಂದು ಮಾರುಕಟ್ಟೆಯಲ್ಲಿ ಅಡಕೆ ಬೆಲೆ ಏನಾದರೂ ಏರಿಕೆ ಕಾಣುತ್ತಿದೆ ಎಂದರೆ ಅದರಲ್ಲಿ ಜೀವರಾಜ್ ಹಾಗೂ ಸಂಸದೆ ಶೋಭಾಕರಂದ್ಲಾಜೆಯವರ ಶ್ರಮ ಬಹಳಷ್ಟಿದ್ದು ಇದರ ಎಲ್ಲಾ ಶ್ರೇಯಸ್ಸು ಅವರಿಗೆ ಸೇರಬೇಕೆಂದು ನುಡಿದರು.

ಇದೇ ಸಂದರ್ಭದಲ್ಲಿ ಮ್ಯಾಂಮ್ಕೋಸ್ ಉಪಾಧ್ಯಕ್ಷರಾದ ಸುಬ್ರಮಣ್ಯ ಯಡಗೆರೆ ನೇತೃತ್ವದಲ್ಲಿ, ರಬ್ಬರ್ ಬೆಳೆಗಾರರ ಸಂಘದ ಉಪಾಧ್ಯಕ್ಷ ಟಿ. ವಿ. ವಿಜಯನ್ ನೇತೃತ್ವದಲ್ಲಿ ಬೆಳೆಗಾರರ ಪರವಾಗಿ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಶಾಸಕ ಡಿ.ಎನ್ ಜೀವರಾಜ್, ಸಂಸದೆ ಶೋಭಾಕರಂದ್ಲಾಜೆ, ತಾಲ್ಲೂಕ್ ಬಿಜೆಪಿ ಅಧ್ಯಕ್ಷ ವೆನಿಲ್ಲಾ ಭಾಸ್ಕರ್,  ಬಿಜೆಪಿ ಮುಖಂಡ ಉಮೇಶ್ ಕಲ್ಮಕ್ಕಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಸ್ವಾಮಿ, ತಾಲ್ಲೂಕ್ ಪಂಚಾಯಿತಿ ಉಪಾಧ್ಯಕ್ಷ ಮಂಜು ಹೊಳೆಬಾಗಿಲು,  ಬಿಜೆಪಿ ಜಿಲ್ಲಾ ಮುಖಂಡರಾದ ಕೆ.ಟಿ.ವೆಂಕಟೇಶ್, ಹೋಬಳಿ ಅದ್ಯಕ್ಷ ಕೆ.ಕೆ.ವೆಂಕಟೇಶ್, ಅಲ್ಪಸಂಖ್ಯಾತ ಮೋರ್ಚಾದ ಪಿ.ಜೆ ಆಂಟೋನಿ, ಇಬ್ರಾಹಿಂ ಶಾಪಿ, ಯು.ಅಶ್ರಪ್,

ಆರ್.ಡಿ.ಮಹೇಂದ್ರ,  ಪ್ರಭಾಕರ್ ಪ್ರಣಸ್ವಿ, ಜಗದೀಶ್ಚಂದ್ರ.ಬಿ. ಕೊಪ್ಪ ತಾಲ್ಲೂಕ್ ಪಂಚಾಯಿತಿ ಅದ್ಯಕ್ಷ ಉದಯ್  ಹುಯಿಗೆರೆ ಹೋಬಳಿ ಅದ್ಯಕ್ಷ ರವಿ  ಕೊಪ್ಪ ತಾಲ್ಲೂಕ್ ಅಧ್ಯಕ್ಷ ಮಹಭಲರಾವ್,  ಯುವಮೋರ್ಚಾ ಜಿಲ್ಲಾಧ್ಯಕ್ಷ ಪುಣ್ಯಪಾಲ್, ನಿಖಿಲ್ ಉಮೇಶ್ ಹೊಸಮನೆ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.





Tuesday 13 June 2017

ಶೃಂಗೇರಿ ಜಗದ್ಗುರುಗಳಿಗೆ ಅಗೌರವ ತೋರಿದ ಸುದ್ದಿ. ಕೇರಳದ ಮಂಗಳಂ .ಕಾಮ್ ನಲ್ಲಿ ಬಂದ ವರದಿ. 








ಕಾಂಗ್ರೇಸ್ , ಕಮುನಿಷ್ಟರಿಂದ ಶೃಂಗೇರಿ ಜಗದ್ಗುರುಗಳಿಗೆ ಅಗೌರವ.


ತಿರುವನಂತಪುರ ಸಮೀಪದ ಮಿತ್ರಾನಂದಪುರ ಶ್ರೀ ಮಹಾವಿಷ್ಣು ದೇವಸ್ಥಾನದ ಕೆರೆ ಅಭಿವೃದ್ಧಿ ಕಾಮಗಾರಿಯ ಲೋಕಾರ್ಪಣಾ ಕಾರ್ಯಕ್ರಮದಲ್ಲಿ  ಶೃಂಗೇರಿ ಮಠದ ಸ್ವಾಮೀಜಿಯವರನ್ನು ಅವರಿಗೆ ಮೀಸಲಾದ ಆಸನದಲ್ಲಿ ಆಸೀನರಾಗಲು ಬಿಡದೆ ಅವರ ಆಸನವನ್ನು ಕಿತ್ತುಕೊಂಡು ಅವಮಾನ ಮಾಡಿದ ಕೇರಳದ  ದೇವಸ್ವಂ ಸಚಿವ ಕಡನಪಳ್ಳಿ ಸುರೇಂದ್ರನ್ ಮತ್ತು ಕಾಂಗ್ರೆಸ್  ಶಾಸಕ  ಶಿವಕುಮಾರ್ ನ ಈ   ಕೀಳು ಮಟ್ಟದ ವರ್ತನೆಯನ್ನ ಮಾಡಿದ್ದು ಎಂದು ಕೇರಳದ ಮಂಗಳಂ.ಕಾಮ್ ವರದಿ ಮಾಡಿದೆ ಹಾಗೂ ಕೇರಳದ  ಮುಖ್ಯಮಂತ್ರಿ ಈ ಅವಮಾನಕಾರಿ ಘಟನೆಯ ಬಗ್ಗೆ  ಶೃಂಗೇರಿ ಸಂಸ್ಥಾನದ  ಸ್ವಾಮೀಜಿ ಯವರ ಕ್ಷಮೆ ಯಾಚಿಸಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.
ಇನ್ನೂ ಜಗದುರುಗಳು ಸಹ ಕೇವಲ ಸಂಬಂದಿಸಿದ ಕಾರ್ಯದಲ್ಲಿ ಭಾಗವಹಿಸಿ ವೇದಿಕೆ ಏರದೇ ವಾಪಸ್ ಆಗಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿ ಬರಬೇಕಿದೆ


ದೇಶದಲ್ಲಿ ಜಾನುವಾರು ಹತ್ಯೆ ನಿಯಂತ್ರಣ ಕಾಯಿದೆ ಜಾರಿಗೆ ಬಂದಾಗ ಇದೇ ಕೇರಳದಲ್ಲಿ ಬೀಫ್ ಫೆಸ್ಟ್ ಆಯೋಜಿಸಿದ್ದ ಈ ಕಾಂಗ್ರೆಸ್- ಸಿಪಿಎಂ ಕೂಟಕ್ಕೆ ಇದು " ವಿನಾಶಕಾಲೇ ವಿಪರೀತ ಬುದ್ಧಿಃ " ಎಂಬಂತಾಗಿದೆ.
ಕಾಂಗ್ರೇಸ್ ಅಧಿಕಾರಕ್ಕೆ ಬಂದರೇ ಎನಾಗುತ್ತದೆ ಎಂಬುದಕ್ಕೆ ಇದೊಂದು ತಾಜಾ ಉದಾರಣೆಯಾಗಿದ್ದು ಸದ್ಯ ಈ ಸುದ್ದಿ ಕ್ಷೇತ್ರದಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದು  ಶೃಂಗೇರಿ ಮಠದ ಭಕ್ತಾಭಿಮಾನಿಗಳು ಈ ಘಟನೆಯ ಸಂಪೂರ್ಣ ಮಾಹಿತಿ ಪಡೆದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ನಿರ್ದಾರ ಮಾಡಿದ್ದಾರೆಂದು ಮಾಹಿತಿಗಳು ಲಭಿಸಿದೆ. ಈ ಬಗ್ಗೆ ಸ್ಥಳಿಯ ಕಾಂಗ್ರೇಸಿಗರು ಯಾವ ಪ್ರತಿಕ್ರೀಯೆ ನೀಡುತ್ತಾರೆಂದು ಕಾದುನೋಡಬೇಕಿದೆ.
ಎಚ್ ಡಿ ಕುಮಾರಸ್ವಾಮಿ ಬಂದನ ಸಾದ್ಯತೆ?

ಜಂತಕಲ್ ಮೈನಿಂಗ್ ಹಗರಣ. ಎಚ್ ಡಿ ಕುಮಾರಸ್ವಾಮಿ ಜಾಮೀನು ಅರ್ಜಿ ತಿರಸ್ಕೃತ.. ಕುಮಾರಸ್ವಾಮಿಗೆ ಬಂಧನ ಬೀತಿ..ಎದುರಾಗಿದೆ. ಸದ್ಯ ಹಾಲಿ  ಜನಾರ್ಧನ ರೆಡ್ಡಿಯವರ ವಿಚಾರಣೆ ನೆಡೆಯುತ್ತಿದ್ದು ರೆಡ್ಡಿ ಸರಿಸುಮಾರು 550ಪುಟಗಳ ದಾಖಲೆಯಲ್ಲಿ ಸತ್ಯಾಂಶವಿದ್ದರೆ ಕುಮಾರಸ್ವಾಮಿಯ ರಾಜಕೀಯ ಬದುಕು ಹಾಗೂ ಜೆಡಿಎಸ್  ಪಕ್ಷದ ಮೇಲೆ ಕಾರ್ಮೋಡ ಆವರಿಸುವುದು . ಇದಕ್ಕೆಲ್ಲ ತನಿಖೆ ಮುಗಿದಮೇಲಷ್ಟೇ ಉತ್ತೃಅ ಸಿಗುವುದು.,

Monday 5 June 2017

ಬಜರಂಗದಳದ ಜವಾಬ್ದಾರಿಯಿಂದ ಅನಿಲ್,ಪುಟ್ನಂಜ ವಿಮುಕ್ತಿಗೊಳಿಸಲಾಗಿದೆ. ಆರ್.ಡಿ.ಮಹೇಂದ್ರ.


ಇದುವರೆಗೆ ಹಿಂದೂಪರ ಹೋರಾಟಗಳಲ್ಲಿ ಗುರುತಿಸಿಕೊಂಡು ಇತ್ತೀಚಿಗೆ  ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ಬಾಳೆಹೊನ್ನೂರಿನ ಅನಿಲ್ ಹಾಗೂ ಪುಟ್ನಂಜ ಎಲಿಗಾರ್ ರವರನ್ನು ಬಜರಂಗದಳದ ಎಲ್ಲಾ ಜವಾಬ್ದಾರಿಗಳಿಂದ ವಿಮುಕ್ತಿಗೊಳಿಸಲಾಗಿದೆ. ಎಂದು ಜಿಲ್ಲಾ ಸಮಿತಿಯಲ್ಲಿ ತೀರ್ಮಾನವಾಗಿದೆ ಎಂದು ವಿಶ್ವಹಿಂದೂಪರಿಷತ್ ನ ಜಿಲ್ಲಾ ಉಪಾಧ್ಯಕ್ಷ ಆರ್.ಡಿ.ಮಹೇಂದ್ರ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday 3 June 2017

ನರಾಪುರದಲ್ಲಿ ಬಿಜೆಪಿ ಯುವಮೋರ್ಚಾದಿಂದ ಕಬ್ಬಡಿ ಕಲರವ...




ಪಂಡಿತ್ ದೀನ್ ದಯಾಳ್ ಉಪಾದ್ಯರವರ ಸ್ಮರಣಾರ್ಥ  ನರಸಿಂಹರಾಜಪುರದಲ್ಲಿ ದಿನಾಂಕ 3-6-2017 ರ ಸಂಜೆ 6ಗಂಟೆಗೆ ಕಬ್ಬಡ್ಡಿ ಪಂದ್ಯಾವಳಿಯನ್ನು  ಬಿಜೆಪಿ ಯುವಮೋರ್ಚಾವತಿಯಿಂದ ಹಮ್ಮಿಕೊಳ್ಳಲಾಗಿದ್ದು ಸಂಜೆ 6 ಗಂಟೆಗೆ ಶಾಸಕ ಡಿ.ಎನ್.ಜೀವರಾಜ್, ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ತಾಲ್ಲೂಕ್ ಬಿಜೆಪಿ ಅಧ್ಯಕ್ಷ ವೆನಿಲ್ಲಾ ಭಾಸ್ಕರ್, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪುಣ್ಯಪಾಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಸ್ವಾಮಿ , ತಾಲ್ಲೂಕ್ ಕಾರ್ಯದರ್ಶಿ ಗೋಪಾಲ್, ಕೆಸುವೆ ಮಂಜುನಾಥ್, ಯುವಮೋರ್ಚಾ ಅದ್ಯಕ್ಷ ರಚನ್ ಹುಯಿಗೆರೆ ಹಾಗೂ ಬಿಜೆಪಿಯ ಎಲ್ಲಾ ಮುಖಂಡರ  ನೇತೃತ್ವದಲ್ಲಿ ನೆಡೆಯಲಿದ್ದು ಈಗಾಗಲೇ ಪಂದ್ಯಾವಳಿಗೆ ಭರ್ಜರಿತಯಾರಿ ನೆಡೆಸಲಾಗಿದೆ ಎಂದು ಸಂಘಟಕರು ಬ್ಲಾಗ್ ಗೆ ತಿಳಿಸಿದ್ದು ಆಸಕ್ತ ತಂಡಗಳು ಯುವಮೋರ್ಚಾ ಅದ್ಯಕ್ಷ ರಚನ್ ರವರನ್ನು ಸಂಪರ್ಕಿಸಲು ಕೋರಿದೆ.




Friday 2 June 2017

ಜೀವರಾಜ್ ರವರಿಂದ ರೈತನ ಕುಟುಂಬಕ್ಕೆ 5ಲಕ್ಷ ರೂ ಚೆಕ್ ವಿತರಣೆ

ಬಿಕ್ಕರಣೆ ಗ್ರಾಮದಲ್ಲಿ ಮೃತ ರೈತ ಶಿವಣ್ಣ ಗೌಡ ,ಅವರ ಪತ್ನಿ ಗೆ ಕ್ಷೇತ್ರ ದ ಶಾಸಕರಾದ ಜೀವರಾಜ್ ರವರು 5 ಲಕ್ಷ ಚೇಕ್ ಅನ್ನು ವಿತರಿಸಿದರು .ಇ ಸಮಯದಲ್ಲಿ ಕೃಷಿ ಆದಿಕಾರಿಗಳು ,ಬಿ.ಜೆ.ಪಿ ಹೋಬಳಿ ಅಧ್ಯಕ್ಷರಾದ ರವಿ ಹುಯಿಗೆರೆ ,ಯುವ ಮೋರ್ಚ ತಾಲೂಕು ಅಧ್ಯಕ್ಷರಾದ ರಚನ್ ಹುಯಿಗೆರೆ ,ಖಾಂಡ್ಯ ಹೋಬಳಿ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ಸುಧನ್ವ ಬಿಕ್ಕರಣೆ ,ಹುಯಿಗೆರೆ ಗ್ರಾಮ ಪಂಚಾಯ್ತಿ ಸದಸ್ಯ ರಾದ ಮೀನಾಕ್ಷಿ ಶಿವಪ್ಪ ,ಗ್ರಾಮಸ್ಥರಾದ ಶಂಕರ್ ಜೆಡುಗುಡಿಗೆ, ಸುಬ್ಬೆ ಗೌಡ ಜೆಡುಗುಡಿಗೆ,ಅವಿನಾಶ್ ಬಿಕ್ಕರಣೆ,ನಂದನ್ ಬಿಕ್ಕರಣೆ ,
ಮೃತ ಶಿವಣ್ಣ ಗೌಡ ಪುತ್ರ ಶರತ್ ಇದ್ದರು.

ಕೊಪ್ಪಳದಲ್ಲೊಂದು ವಿಲಕ್ಷಣ ಮಗು ಜನನ. 





ಕೊಪ್ಪಳ ಜಿಲ್ಲೆಯ ವ ಕುಷ್ಟಗಿ ತಾಲೂಕಿನ ಮುದೆನೂರು ಪಿಎಚ್ ಸಿಯಲ್ಲಿ ಮಗು ಜನನ.

ಜುಮಲಾಪುರ ಗ್ರಾಮದ ಸಂಗಮ್ಮ ಮತ್ತು ಬೀರಲಿಂಗಪ್ಪ ಬಳೂಟಗಿ ಎಂಬ ದಂಪತಿಗಳಿಗೆ ಜನಿಸಿದೆ ಮಗು.

ಇದು ಅವರಿಗೆ ಮೊದಲ ಮಗು.

ಹುಟ್ಟಿದ ೧೦ ನಿಮಿಷಗಳ ನಂತರ ಈ ಹೆಣ್ಣು ಮಗು ಸಾವು.

ವಿಚಿತ್ರ ಮಗು ಕಂಡು ಜನರಲ್ಲಿ ಆಶ್ಚರ್ಯ.