Wednesday 8 November 2017

ಆಧುನಿಕ ಬಾಳೆಹೊನ್ನೂರು ನಿರ್ಮಾಣ  ಜೀವರಾಜ್ ಕನಸು-  ವೆನಿಲ್ಲಾ ಭಾಸ್ಕರ್


ಕೇಂದ್ರ ಸರ್ಕಾರದ ಸಹಯೋಗದಲ್ಲಿ ಮಾನ್ಯ ಶಾಸಕರಾದ ಶ್ರೀ ಡಿ.ಎನ್.ಜೀವರಾಜ್ ರವರ ಪರಿಶ್ರಮದ ಪಲವಾಗಿ ಬಾಳೆಹೊನ್ನೂರಿನ ಜನತೆ, ಶಾಲಾ ಮಕ್ಕಳು ದಿನನಿತ್ಯ ಹಿಡಿಶಾಪ ಹಾಕುತಿದ್ದ ಬಾಳೆಹೊನ್ನೂರಿನಿಂದ ಮೇಲ್ಪಾಲ್ ಕೊಪ್ಪ ರಸ್ತೆಗೆ   ಬಾಳೆಹೊನ್ನೂರಿನ ಇತಿಹಾಸದಲ್ಲೇ ಬೃಹತ್ ಯೋಜನೆಯ ಅಂದರೇ ಸರಿಸುಮಾರು 8 ಕೋಟಿ ರೂಗಳ ರಸ್ತೆ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದ್ದು ಈ ಯೋಜನೆಯಡಿ ಬಾಳೆಹೊನ್ನೂರಿನ ಬಹು ಹಳೆಯದಾದ ಡೋಬಿಹಳ್ಳಕ್ಕೆ 10 ಮೀಟರ್ ಅಗಲದ ಕಾಂಕ್ರಿಟ್ ಸೇತುವೆ ಹಾಗೂ  ಬಾಳೆಹೊನ್ನೂರು ಜೆಸಿ ವೃತ್ತದಿಂದ  ಹೊಸ ಪೆಟ್ರೋಲ್ ಬಂಕ್ ವರೆಗೆ 10 ಮೀಟರ್ ಅಗಲದ ಕಾಂಕ್ರೀಟ್ ರಸ್ತೆ ಹಾಗೂ ರಸ್ತೆ ಎರೆಡೂ ಬದಿಯಲ್ಲಿ 1 ಮೀಟರ್ ಅಗಲದ ಇಂಟರ್ ಲಾಕ್ ಪಾದಚಾರಿ ಮಾರ್ಗ ಹಾಗೂ ಎರೆಡೂ ಬದಿ ಬಾಕ್ಸ್ ಚರಂಡಿ ನಿರ್ಮಾಣಗೊಳ್ಳಲಿದೆ. ಹೊಸ ಪೆತ್ರೋಲ್ ಬಂಕ್ ನಿಂದ  ಕೆರೆ ಚೌಡೇಶ್ವರಿ  ದೇವಸ್ಥಾನದವರೆಗೆ  7 ಮೀಟರ್ ಅಗಲದ ಕಾಂಕ್ರೀಟ್ ರಸ್ತೆ ನಿರ್ಮಾಣಗೊಳ್ಳಲಿದೆ. ಕೆರೆ ಚೌಡೇಶ್ವರಿ ದೇವಸ್ಥಾನದಿಂದ ಮೇಲ್ಪಾಲ್ ವರೆಗೆ ಈಗಿರುವ ರಸ್ತೆಗೆ ಡಾಂಬರೀಕರಣ ಗೊಳ್ಳಲಿದೆ.
ಈ ಕಾರ್ಯದಬಗ್ಗೆ ಬಾಳೆಹೊನ್ನೂರಿನ ಜನತೆ ಸಂಪೂರ್ಣ ಹರ್ಷಚಿತ್ತರಾಗಿದ್ದು ಮಾನ್ಯ ಶಾಸಕರ ಕಾರ್ಯವೈಕರಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರಲ್ಲದೇ  ಇತಿಹಾಸ ಪ್ರಸಿದ್ದ ಯಾತ್ರಾಸ್ಥಳವಾದ ಶ್ರೀ ರಂಭಾಪುರೀ ಪೀಠವು ಇದೇ ರಸ್ತೆಯ ಮಾರ್ಗಮದ್ಯೆ ಬರುವುದರಿಂದ ಹಾಗೂ ಬಾಳೆಹೊನ್ನೂರಿನ ಹೃದಯಬಾಗದರಸ್ತೆ ಇದಾಗಿರುವುದರಿಂದ ಜೆಸಿ ಸರ್ಕಲ್ ನಿಂದ ಕೆರೆ ಚೌಡಿ ದೇವಸ್ಥಾನದವರೆಗೂ 10 ಮೀಟರ್ ಅಗಲದ ರಸ್ತೆ ಮಾಡಿ ಎರೆಡೂ ಬದಿ ಇಂಟರ್ ಲಾಕ್ ಪಾದಚಾರಿ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಮಾಡಬೇಕೆಂದು ಈಗಾಗಲೇ ಸ್ಥಳಿಯ ಬಿಜೆಪಿ ಮುಖಂಡರಾದ ವೆನಿಲ್ಲಾ ಭಾಸ್ಕರ್. ಕಲ್ಮಕ್ಕಿ ಉಮೇಶ್. ಪ್ರಭಾಕರ್ ಪ್ರಣಸ್ವಿ. ಕೆ.ಟಿ ವೆಂಕಟೇಶ್. ಕೆ.ಕೆ.ವೆಂಕಟೇಶ್ ಜಗದೀಶ್ಚಂದ್ರ.ಆರ್.ಡಿ.ಮಹೇಂದ್ರರವರ ಬಳಿ ತಿಳಿಸಿದ್ದು ಈ ಸಂಬಂದ ಅವರುಗಳು ಶಾಸಕರಬಳಿ ಈ ಸಂಬಂದ ಚರ್ಚಿಸಿ ಮುಂದಿನದಿನಗಳಲ್ಲಿ ಈ ಕೆಲಸಕ್ಕೆ ಹೆಚ್ಚುವರಿ ಹಣ ಇಡುವಂತೆ ಶಾಸಕರ ಬಳಿ ಮನವಿ ಸಲ್ಲಿಸಲಾಗುವುದೆಂದು ತಿಳಿಸಿದ್ದಾರೆ.

ಈ ಸಂಬಂದ ಮಾತನಾಡಿದ ತಾಲ್ಲೂಕ್ ಅಧ್ಯಕ್ಷ ವೆನಿಲ್ಲಾ ಭಾಸ್ಕರ್ ಮಾನ್ಯ ಶಾಸಕರ ಅನುದಾನದಲ್ಲಿ ಬಾಳೆಹೊನ್ನೂರು ಆಧುನಿಕವಾಗುತ್ತಿದ್ದು ಮುಂದಿನದಿನಗಳಲ್ಲಿ ಬಾಳೆಹೊನ್ನೂರಿನ ಜನತೆ ಬಿಜೆಪಿ ಯನ್ನು ಸಂಪೂರ್ಣವಾಗಿ ಬೆಂಬಲಿಸಿದರೇ ಬಾಳೆಹೊನ್ನೂರಿನ ನಗರದ ಎಲ್ಲಾ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಪರಿವರ್ತಿಸಲು ಶ್ರಮಿಸಲು ಬಿಜೆಪಿ ಸಿದ್ದವಿದೆ ಎಂದು ತಿಳಿಸಿದರು.