Saturday 24 March 2018

ರಾಹುಲ್, ಸಿದ್ದು ಗೆ ಶೃಂಗೇರಿ ಜಗದ್ಗುರುಗಳಿಂದ ತೀವ್ರ ತರಾಟೆ ??

*ಶೃಂಗೇರಿ ರಾಹುಲ್ ಬೇಟಿಯ ಆ 20 ನಿಮಿಷ*

ಶೃಂಗೇರಿಗೆ ರಾಹುಲ್ ಗಾಂದಿ ಮತ್ತು ಸಿ.ಎಂ.ಸಿದ್ದರಾಮಯ್ಯ ಬೇಟಿ ನಂತರ ಹಿಂದು ಸಿದ್ಧಾಂತವ ಬಲವಾಗಿ ಪ್ರತಿಪಾದಿಸುವ  ಪತ್ರಕರ್ತನಾಗಿ ನನ್ನಲ್ಲೊಂದಿಷ್ಟು ಪ್ರಶ್ನೆಗಳು ಉದ್ಭವಿಸಿದವು. ಜೀ ಹುಜೂರ್ ಎಂದು ತನ್ನ ನಾಯಕ ಹೇಳಿದ್ದನ್ನೇ ಒಪ್ಪುವ ಸಂಸ್ಕೃತಿ ಇರುವ ಕಾಂಗ್ರೇಸ್ ನಲ್ಲಿ ರಾಹುಲ್ ಗಾಗಲಿ ಅಥವ ಹಿಂದುತ್ವದ ಬದ್ದ ವೈರಿ ಎಂದು ಬಿಂಬಿತವಾಗಿರುವ ಸಿದ್ದರಾಮಯ್ಯನಾಗಲಿ ತಪ್ಪು ಮಾಡಿದಾಗ ಬುದ್ದಿ ಹೇಳುವ ಕೆಲಸವನ್ನು ಯಾರೂ ಮಾಡುವುದಿಲ್ಲ. ಹಿಂದುತ್ವಕ್ಕೆ ಧಕ್ಕೆ ತರುವಂತ ಕಾರ್ಯ ಮಾಡಿದಾಗ ಅದನ್ನೂ ಸಹ ಕಾಂಗ್ರೇಸ್ ನಲ್ಲಿರುವ ಹಿಂದೂ ಸಮುದಾಯ ವಿರೋದಿಸುವುದಿಲ್ಲ ಕಾರಣ ಒನ್ಸ್ ಎಗೈನ್ ಜೀ ಹುಜೂರ್ ಸಂಸ್ಕೃತಿ. ಆದರೇ  ಮನುಷ್ಯ ಗುಣಧರ್ಮದ ಎಲ್ಲೆಯನ್ನು ಮೀರಿ ನಿತ್ಯ ಆಧ್ಯಾತ್ಮದ ಬಗ್ಗೆ ಚಿಂತಿಸುತ್ತ ದೇಶದ ಕೋಟ್ಯಾಂತರ ಭಕ್ತರ ಸಲಹಿ ಆಶೀರ್ವದಿಸುತ್ತಿರುವ ಶೃಂಗೇರಿ ಜಗದ್ಗುರುಗಳಾದರೂ ಈ ಸಿದ್ದರಾಮಯ್ಯನಿಗೆ, ರಾಹುಲ್ ಗಾಂದಿಗೆ ಬುದ್ದಿ ಹೇಳಿ ಸರಿದಾರಿಗೆ ತರಬಹುದಿತ್ತಲ್ಲವೇ? ಅಲ್ಲದೇ ಅವರಿಬ್ಬರಿಗೂ ಬುದ್ದಿ ಹೇಳುವ ತಾಕತ್ತು ಮತ್ತು ಜರೂರತ್ತು ಜಗದ್ಗುರುಗಳಿಗೆ ಇತ್ತಲ್ಲವೇ ?  ನೋಡೋಣ  ನರಸಿಂಹವನದಲ್ಲಿ ಸಿದ್ದು ಮತ್ತು ರಾಹುಲ್ ಬೇಟಿ ನೀಡಿದ ಆ 20 ನಿಮಿಷ ಏನು ನೆಡೆದಿರಬಹುದೆಂದು ಆಲೋಚಿಸುತ್ತ ಒಂದಿಷ್ಟು ಪತ್ರಕರ್ತರೊಂದಿಗೆ ಚರ್ಚಿಸಿ ಉತ್ತರ ಹುಡುಕುತ್ತಾ ಹೊರಟಾಗಲೇ ಸಿಕ್ಕ ಉತ್ತರ ನಿಜಕ್ಕೂ ಆಶ್ಚರ್ಯ ಮತ್ತು ಸಂತೋಷವು ಮತ್ತು ಶೃಂಗೇರಿ ಜಗದ್ಗುರುಗಳ ಬಗ್ಗೆ ಹೆಮ್ಮೆ ಗೌರವ ಇಮ್ಮಡಿಯಾಯಿತು. ಶ್ರೀ ಭಾರತಿ ತೀರ್ಥರಂತ ಜಗದ್ಗುರುಗಳನ್ನು ಪಡೆದ ನಾವೇ ಧನ್ಯ ಎಂಬ ಭಾವನೆಯುಂಟಾಯಿತು.*


*ಮಠಕ್ಕೆ ಬಂದಿದ್ದೀರಿ ಸಂತೋಷ ಆದರೇ ನಿಮ್ಮ ಕಾರ್ಯಗಳಿಗೆ ನಮ್ಮ ಆಶೀರ್ವಾದವಿಲ್ಲ.*

ಶೃಂಗೇರಿ ನನಗೇನು ಹೊಸದಲ್ಲ ಜೆಸಿಬಿಎಂ ಕಾಲೇಜಿನ ವಿದ್ಯಾರ್ಥಿಯಾದ ನನಗೆ ಒಂದು ಅವಿನಾಭಾವ ಸಂಬಂದವಿದೆ. ಅನೇಕ ನನ್ನ ಸಹಪಾಠಿಗಳು ಶೃಂಗೇರಿ ಮಠ ಹಾಗೂ ಸುತ್ತಮುತ್ತ ಕೆಲಸ ಕಾರ್ಯ ಮಾಡಿಕೊಂಡು ಈಗಲೂ ನನ್ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದು ಆ ಎಳೆಯನ್ನು ಆದರಿಸಿ ವಿಚಾರಿಸಿದಾಗ ಹೊರ ಬಂದ ಸುದ್ದಿ ನಿಜಕ್ಕೂ ಹಿಂದುಗಳು ಗೌರವ ಪಡುವಂತಹದ್ದು. ಹೌದು ಶ್ರೀ ಮಠಕ್ಕೆ ಬೇಟಿ ನೀಡಿ ಜಗದ್ಗುರುಗಳ ದರ್ಶನಾಶೀರ್ವಾದ ಪಡೆಯುವವರು ಮಡಿ ಬಟ್ಟೆಯನ್ನು ದರಿಸಿ ಹೋಗುವುದು ಸಹಜ ಹಾಗೂ ಸಂಪ್ರದಾಯ ಆದರೇ ಸದಾ ಹಿಂದುತ್ವ ವಿರೋದಿ ನಿಲುವು ಹೊಂದಿದ ಸಿದ್ದು ಮತ್ತು ರಾಹುಲ್ ಮಡಿಯನ್ನು ದರಿಸಿ ಬಂದಿದ್ದರೂ ಆ ಮಡಿಯ ಮೇಲೆ ವಿಶೇಶವಾಗಿ ಮತ್ತೊಂದು *ಕೇಸರಿ ಶಲ್ಯೆಯನ್ನು ಕಡ್ಡಾಯ  ಧರಿಸುವಂತೆ  ನೋಡಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ.* ನಂತರ ಜಗದ್ಗುರುಗಳ ಬೇಟಿಗೆ ಹೋದಾಗ ಜಗದ್ಗುರುಗಳು ದರ್ಶನದ ನಂತರ ಸಿದ್ದು ಮತ್ತು ರಾಹುಲ್ ಗಾಂದಿ ವೇಣುಗೋಪಾಲರನ್ನ ತರಾಟೆಗೆ ತೆಗೆದುಕೊಂಡಿದ್ದಾರೆಂಬ ಸ್ಪೋಟಕ ಮಾಹಿತಿ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.
*ದರ್ಶನದ ನಂತರ ಜಗದ್ಗುರುಗಳು ಕೇಳಿದ ಪ್ರಶ್ನೆ ಒಂದೇ "ಹಿಂದುತ್ವದ ಬಗ್ಗೆ ನಿಮಗ್ಯಾಕೆ ಇಷ್ಟು ತಾತ್ಸಾರ ?.  ನಿಮಗೆ ಹಿಂದುತ್ವದ ಬಗ್ಗೆ ಅಸಹನೆ ಇದ್ದರೆ ನೀವು ಅದರಿಂದ ದೂರವಿರಿ ಅದುಬಿಟ್ಟು  ಹಿಂದೂ ಧರ್ಮದ ಜಾತಿ ಜಾತಿಗಳ ಮದ್ಯೆ ವೈಶಮ್ಯ ತರುವಂತ ಕೆಲಸ ಮಾಡಬೇಡಿ. ಮಠ ಮಂದಿರಗಳ ಬಗ್ಗೆ ನಿರ್ಲಕ್ಷ ಮಾಡಬೇಡಿ, ಯಾವ ಮಠ ಮಂದಿರಗಳು ಏನು ತಪ್ಪು ಮಾಡಿವೆ? ಮಠ ಮಂದಿರಗಳಿಂದ ಸಂಗ್ರಹವಾದ ಮುಜರಾಯಿ ಇಲಾಖೆಯ ಹಣವನ್ನು ಮಠ ಮಂದಿರಗಳಿಗೆ ವಿನಿಯೋಗಿಸುವುದು ಬಿಟ್ಟು  ಅನ್ಯ ಧರ್ಮದ ಕಾರ್ಯಗಳಿಗೆ ಬಳಸುವುದು ತಪ್ಪು. ನೀವು ನಮ್ಮ ಮಠಕ್ಕೆ ಬೇಟಿ ನೀಡಿದ್ದೀರಿ ಸಂತೋಷ ಆದರೇ ನೀವು  ಹಿಂದೂ ವಿರೋದಿ ಕಾರ್ಯಗಳನ್ನು ಮಾಡುತ್ತಿರುವುದರಿಂದ ನಮ್ಮ ಆಶೀರ್ವಾದ ನಿಮಗಿರುವುದಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.* ಇದರಿಂದ ವಿಚಲಿತರಾದ ಸಿದ್ದು ಮತ್ತು ರಾಹುಲ್ ಹೊರ ಬಂದಾಗ  ಮಾದ್ಯಮಗಳಿಗೆ ಈ ವಿಚಾರ ಹೋಗದಂತೆ ಎಚ್ಚರವಹಿಸಿದ್ದಾರೆ. ಆದರೇ ಸಿದ್ದು ಮತ್ತು ರಾಹುಲ್ ಹೋರ ಹೋದ ನಂತರ ಮಠದ ಸಿಬ್ಬಂದಿ ವರ್ಗದವರು ಜಗದ್ಗುರುಗಳ ನುಡಿಯನ್ನು ಸಂತೋಷಗೊಂಡು ಅವರವರ ಆಪ್ತರ ಬಳಿ ಮಾತನಾಡಿದ್ದು ಸದ್ಯ ಕಾಂಗ್ರೇಸಿಗರಿಗೆ ಶೃಂಗೇರಿ ಜಗದ್ಗುರುಗಳು ತರಾಟೆಗೆ ತೆಗೆದುಕೊಂಡ ಸುದ್ದಿ ಜನರ ಬಾಯಿಂದ ಬಾಯಿಗೆ ಹರಿದಾಡುತ್ತಿದೆ. *ರಾಜಕೀಯ ಏನೇ ಇರಲಿ ಜಗದ್ಗುರುಗಳ ಸ್ಥಾನದಿಂದ ನಿಜಕ್ಕೂ ದಾರಿತಪ್ಪಿದವರಿಗೆ ಬುದ್ದಿ ಹೇಳಿದ ಕೆಲಸ ಮಾಡಿದ  ಶೃಂಗೇರಿ ಜಗದ್ಗುರುಗಳು ನಿಜಕ್ಕೂ ಮಲೆನಾಡಿಗರ ಶೃಂಗೇರಿ ಭಕ್ತರ ಹಾಗೂ ಕೋಟ್ಯಾಂತರ ಹಿಂದುಗಳ ಹೆಮ್ಮೆ ಎಂದರೆ ತಪ್ಪಾಗಲಾರದು.*

*ಜಗದೀಶ್ಚಂದ್ರ.ಬಿ*
*ಸಂಪಾದಕರು. ಹಿಂದುತ್ವ ಬಂದುತ್ವ ಮಾಸಪತ್ರಿಕೆ*

Wednesday 21 March 2018

ಮಾಗುಂಡಿಯಲ್ಲಿ ಬಾನುವಾರ  ಜೀವರಾಜ್ ರವರಿಂದ ವಿವಿದ ಕಾಮಗಾರಿಗೆ ಚಾಲನೆ ಮತ್ತು ಉದ್ಘಾಟನೆ.


ಇದೇ ಬರುವ 25-3-2018ರ ಬಾನುವಾರ ಮದ್ಯಾನ 3 ಗಂಟೆಗೆ ಸರಿಯಾಗಿ ಮಾಗುಂಡಿಯಲ್ಲಿ *ಹಿರೆಮಕ್ಕಿ ಕಾಲೋನಿಯಲ್ಲಿ ರೂ 25ಲಕ್ಷ ರೂಗಳ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಶಾಸಕ ಡಿ.ಎನ್ ಜೀವರಾಜ್ ರವರ ವಿಶೇಷ ನಿಧಿಯಲ್ಲಿ ನಿರ್ಮಿಸಲಾಗಿರುವ ನೂತನ ಆಟೋ ನಿಲ್ದಾಣದ ಉದ್ಘಾಟನೆ ತರುವಾಯ ಅಲ್ಪಸಂಖ್ಯಾತ ನಿಧಿಯಡಿ ರೂ 10ಲಕ್ಷ ರೂ ಗಳ ಕಾಂಕ್ರೀಟ್ ರಸ್ತೆಗೆ ಶಂಕುಸ್ಥಾಪನೆ ಯನ್ನು ಶಾಸಕ ಡಿ.ಎನ್ ಜೀವರಾಜ್ ನೆರವೇರಿಸಲಿದ್ದಾರೆಂದು ಬಿಜೆಪಿ ತಾಲ್ಲೂಕ್ ಅಧ್ಯಕ್ಷ ವೆನಿಲ್ಲಾ ಭಾಸ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರುಗಳು, ಸಾರ್ವಜನಿಕ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ ಬೇಕಾಗಿ ಕೋರಿದ್ದಾರೆ.

Monday 19 March 2018

ಬಾಳೆಹೊನ್ನೂರು ಗಾಳಿಮಳೆಗೆ ಹಾನಿಗೊಳಗಾದ ಮನೆಗಳಿಗೆ ಜೀವರಾಜ್ ಬೇಟಿ.






ಶೃಂಗೇರಿ ಕ್ಷೇತ್ರ ನ್ಯೂಸ್.19.
ಬಾಳೆಹೊನ್ನೂರು ಹಾಗೂ ಸುತ್ತಮುತ್ತ ಕಳೆದ ಮೂರು ದಿನಗಳಿಂದ ಸುರಿದ ಗಾಳಿಮಳೆಗೆ ಅನೇಕ ಮನೆಗಳು ಹಾನಿಗೀಡಾಗಿದ್ದು ಶಾಸಕ ಜೀವರಾಜ್ ಹಾನಿಗೊಳಗಾದ ಮನೆಗಳಿಗೆ ಬೇಟಿ ನೀಡಿ ಸಂಬಂದ ಪಟ್ಟ ಇಲಾಖೆಯವರೊಂದಿಗೆ ಚರ್ಚಿಸಿದರು.
ಬಾಳೆಹೊನ್ನೂರಿನ ಹಿರಿಯ ಬಿಜೆಪಿ  ಕಾರ್ಯಕರ್ತ ಕೋಮಲ್ ಬೇಕರಿ ಮೋಹನ್ ರವರ ಮನೆ ತೆಂಗಿನ ಮರಬಿದ್ದು ಮನೆಯ ಮೊದಲನೆ ಮಹಡಿ ಸಂಪೂರ್ಣ ಜಖಂ ಗೊಂಡಿದ್ದನ್ನು ವೀಕ್ಷಿಸಿ ಮನೆಯವರೊಂದಿಗೆ ಚರ್ಚಿಸಿ ಇಲಾಖೆಗೆ ದಾಖಲೆಗಳನ್ನು ನೀಡುವಂತೆ ಸೂಚಿಸಿದರು. ನಂತರ ಅಯ್ಯಪ್ಪನಗರದ ಬೈರಪ್ಪನವರ ಮನೆಗೆ ಬೇಟಿ ಇತ್ತು ಹಾನಿಯ ಪ್ರಮಾಣವನ್ನು ವೀಕ್ಷಿಸಿದರು.
ಶಾಸಕರೊಂದಿಗೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಲ್ಮಕ್ಕಿ ಉಮೇಶ್, ಬಿಜೆಪಿ ಜಿಲ್ಲಾ ಮುಖಂಡ ಕೆ.ಟಿ.ವೆಂಕಟೇಶ್, ಬಿಜೆಪಿ ವಕ್ತಾರ ಜಗದೀಶ್ಚಂದ್ರ, ಬಿಜೆಪಿ ಮಾಜಿ ಹೋಬಳಿ ಅಧ್ಯಕ್ಷ ಧರ್ಮೇಗೌಡ, ಕಲ್ಮಕ್ಕಿ ಹರೀಶ್ ಇನ್ನಿತರ ಮುಖಂಡರುಹಾಜರಿದ್ದರು.

Saturday 17 March 2018

ರಂಭಾಪುರೀ ಜಗದ್ಗುರುಗಳ ದರ್ಶನಾಶೀರ್ವಾದಕ್ಕೆ ಅಮಿತ್ ಷಾ .

ವೀರಶೈವ ಲಿಂಗಾಯತ ಧರ್ಮದ ಪ್ರಥಮ ಪೀಠವಾದ ಶ್ರೀ ರಂಭಾಪುರೀ ಜಗದ್ಗುರುಗಳ ದರ್ಶನಾಶೀರ್ವಾದಕ್ಕೆ ಶೀಘ್ರದಲ್ಲೇ ಬಾಳೆಹೊನ್ನೂರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೇಟಿ ನೀಡಲಿದ್ದಾರೆಂದು ಶೀಘ್ರದಲ್ಲೇ ದಿನಾಂಕ ನಿರ್ಧಾರವಾಗಲಿದೆಯೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಲ್ಮಕ್ಕಿ ಉಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಮಿತ್ ಷಾ ರವರ ಕಾರ್ಯಕ್ರಮ ಶೃಂಗೇರಿ ಕ್ಷೇತ್ರಮಟ್ಟದಲ್ಲಿ ಕಾರ್ಯಕರ್ತರಲ್ಲಿ ಇನ್ನಷ್ಟು ಚೈತನ್ಯ ತುಂಬಲಿದ್ದು ಅಮಿತ್ ಷಾ ರವರ ಸ್ವಾಗತಕ್ಕೆ ಬಾಳೆಹೊನ್ನೂರು ಬಿಜೆಪಿ ಘಟಕ ವಿಶೇಷವಾದ ತಯಾರಿ ಮಾಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

Thursday 15 March 2018

ಬಾಳೆಹೊನ್ನೂರು-ಸಿಡಿಲು ಬಡಿದು ಮನೆ ಭಸ್ಮ.









ಬಾಳೆಹೊನ್ನೂರು  ವರ್ಷದ ಮೊದಲ ಮಳೆ ಆಗಮನಕ್ಕಾಗಿ ಹಾತೋರೆಯುತ್ತಿದ್ದಾಗಲೇ ಮಳೆ ಆರಂಭಕ್ಕೂ ಮುನ್ನಾ ಗುಡುಗು ಸಿಡಿಲಿನ ಅರ್ಭಟಕ್ಕೆ ಮನೆ ಸಂಪೂರ್ಣ ಭಸ್ಮವಾಗಿದ್ದು ಅದೃಷ್ಟವಷಾತ್ ಯಾವುದೇ ಪ್ರಾಣ ಹಾನಿಯಾಗಿರುವುದಿಲ್ಲ.
ಶ್ರೀ ರಂಭಾಪುರೀ ಮಠ ವ್ಯಾಪ್ತಿಯ ಅವಿನಾಶ್ ಎಂಬುವವರ ಮನೆಯಲ್ಲಿ ದಿನಾಂಕ 14-3-2018 ರ ರಾತ್ರಿ 7ಗಂಟೆಗೆ ಸರಿಯಾಗಿ ಅವಿನಾಶ್ ರವರ ಪತ್ನಿ ಕ್ಯಾಂಡಲ್ ತರುವ ಉದ್ದೇಶದಿಂದ ಮನೆಯ ಬಾಗಿಲು ಹಾಕಿ ಅಂಗಡಿಗೆ ತೆರಳಿದ್ದಾಗ ಹೊರಗಡೆ ಸಣ್ಣದಾಗಿ ಗುಡುಗು ಮಿಂಚು ಆರಂಭವಾಗಿದೆ.  ಮನೆಯ ಮೇಲ್ಭಾಗದ ಸಣ್ಣ ಡಿಷ್ ಮುಖಾಂತರ ಸಿಡಿಲು ಮನೆಯನ್ನು ಪ್ರವೇಶಿಸಿದ್ದು ಮನೆಯಲ್ಲಿದ್ದ ಟಿ.ವಿ. ದಿನನಿತ್ಯದ ಪರಿಕರ, ಬಟ್ಟೆ ಪಾತ್ರೆ ಎಲ್ಲವೂ ಸಿಡಿಲಿನ ಪ್ರಕರತೆಗೆ ಸುಟ್ಟುಹೋಗಿದ್ದು 4 ಕೊಠಡಿಗಳ ಮನೆಯಲ್ಲಿ 3 ಕೊಠಡಿಯ ಮನೆ ಪರಿಕರಗಳು ಸುಟ್ಟು ಕರಕಲಾಗಿವೆ. ಮನೆಯ ದಿನ ನಿತ್ಯದ ಪರಿಕರಗಳು ಮರುಬಳಕೆಗೆ ಬಾರದಷ್ಟು ಸುಟ್ಟು ಕರಕಲಾಗಿದ್ದು ಮನೆಯ ಕಾಂಕ್ರೀಟ್ ಗೋಡೆಯೂ ನಾಲ್ಕಾರು ಕಡೆ ಬಿರುಕುಬಂದಿದ್ದು ಅದೃಷ್ಠವಷಾತ್ ಮನೆಯಲ್ಲಿದ್ದ ತುಂಬಿದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿಲ್ಲ. ಗ್ಯಾಸ್ ಸಿಲಿಂಡರ್ ಏನಾದರೂ ಸ್ಪೋಟಗೊಂಡಿದ್ದರೆ ಅಕ್ಕಪಕ್ಕದ ಮನೆಗೂ ಬೆಂಕಿ ಆವರಿಸಿ ದೊಡ್ಡ ಅವಘಡವೇ ಸಂಭವಿಸುವ ಸಾದ್ಯತೆಯಿತ್ತು ಎಂದು ಸ್ಥಳಿಯರು ನುಡಿಯುತ್ತಾರೆ. ಒಟ್ಟಾರೆ 90ರಿಂದ 1ಲಕ್ಷ ರೂಗಳು ನಷ್ಟವುಂಟಾಗಿರಬಹುದೆಂದು ಅಂದಾಜಿಸಲಾಗಿದೆ.
ಇನ್ನಾದರೂ ಮಲೆನಾಡಿಗರು ಗುಡುಗು ಮಿಂಚು ಬರುವ ಸಂಧರ್ಭದಲ್ಲಿ ಮನೆಯ ಎಲೆಕ್ಟಾನಿಕ್ ವಸ್ತುಗಳ ಸಂಪರ್ಕವನ್ನು ತಪ್ಪಿಸಿ ಎಚ್ಚರವಹಿಸಿದರೇ ಮುಂದಾಗುವ ಅವಘಡವನ್ನು ತಪ್ಪಿಸಬಹುದು.

Wednesday 14 March 2018

2018 ರ ಯುಗಾದಿಯ ರಾಶಿಭವಿಷ್ಯ ಗೋಚಾರ ಫಲ.


ಮೇಷ: ಮನೆಯಲ್ಲಿ ಶುಭಕಾರ್ಯಗಳು ವರ್ಷಾರಂಭದಲ್ಲಿ ಜರಗುವುದು ಸುಖಪ್ರದವು ಸಂತೋಷವು ಹೆಚ್ಚಾಗುವುದು
ವ್ಯಾಪಾರದಲ್ಲಿ ವಿಶೇಷ ಲಾಭ ಪಾಲುದಾರರಿಂದ ಶುಭಕರ ತಾಯಿಯ ಆರೋಗ್ಯದಲ್ಲಿ ಸಮಸ್ಸೆಗಳು ವಾಹನಗಳಿಂದ ತೊಂದರೆ ದಂಡ ಕಟ್ಟಬೇಕಾಗುತ್ತದೆ ಭೂಮಿಯಿಂದ ಅನಾನುಕೂಲಗಳವೆ ಹೆಚ್ಚು ವಿಧ್ಯಾರ್ಥಿಗಳು ಕಷ್ಟಪಟ್ಟು ಓದಬೇಕಾಗುತ್ತದೆ ಕೆಟ್ಟಕನಸುಗಳು ಹೆಚ್ಚು ಕಾಣುವುದು ದೀರ್ಘ ಪ್ರಯಾಣಗಳು ವಾತರೋಗದಿಂದ ಸಮಸ್ಸೆಗಳು ಹೆಚ್ಚಾಗುವುದು
ಆದಿತ್ಯ ಹೃದಯ ಪಾರಾಯಣ ಮತ್ತುಶಿವ ಪಂಚಾಕ್ಷರಿ ಮಂತ್ರವನ್ನು ತಪ್ಪದೆ ಪಠಿಸಿರಿ.
ವೃಷಭ: ವೃಷಭ ರಾಶಿಯವರಿಗೆ ವರ್ಷಾರಂಭದಲ್ಲಿ ಸಾಧಾರಣ ಫಲವನ್ನು ಅನುಭವಿಸುವರು ಕೌಟುಂಬಿಕ ಜೀವನದಲ್ಲಿ ಸಮಸ್ಸೆಗಳು ಹೆಚ್ಚಾಗುವುದು ಕಷ್ಟಪಟ್ಟು ದುಡಿದರೂ ಲಾಭ ಕಡಿಮೆಯಾಗುವುದು ಸಾಲಗಳು ಹೆಚ್ಚಾಗುವುದು ಮದುವೆ ವಿಚಾರದಲ್ಲಿ ಅಶಾಂತಿ ಆದರೆ ವರ್ಷಾಂತ್ಯದಲ್ಲಿ ಶುಭಕರವಾಗುವುದು ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆಯಾಗುವಿರಿ.
ಶನಿ ಅಷ್ಟೋತ್ತರ ಶನಿ ದೇವರ ಪೂಜೆ ಮಾಡುಬೇಕು.

ಮಿಥುನ: ಮಿಥುನ ರಾಶಿಯವರಿಗೆ ವರ್ಷಪೂರ್ತಿ ಶನಿ ಸಪ್ತಮದ ದೃಷ್ಟಿ ಬೀಳುವುದರಿಂದ ನೀಚ ಜನರ ಸಹವಾಸ ಗಂಡ ಹೆಂಡತಿಯರಲ್ಲಿ ಮನಸ್ಥಾಪಗಳು ಹೆಚ್ಚಾಗುವುದು ವ್ಯಾಪಾರದಲ್ಲಿ ನಿಧಾನವಾಗಿ ಬೆಳವಣಿಗೆ ಯಾಗುವುದು ಪಾಲದಾರರಿಂದ ಮೋಸ ಮನೆಯಲ್ಲಿ ಅಶಾಂತಿ ಹೆಚ್ಚಾಗುವುದು ಒಳ್ಳೆಯ ಆರೋಗ್ಯ ಶರೀರ ಸುಖ ಮಕ್ಕಳ ಭಾಗ್ಯ ಒದಗುವುದು ಸ್ನೇಹಿತರಿಂದ ಸಹಾಯ ದೊರಕುವುದು ಉನ್ನತ ವಿದ್ಯಾಭ್ಯಾಸದಲ್ಲಿ ಆಸಕ್ತಿ ಧಾರ್ಮಿಕ ಭಾವನೆಗಳು ಹೆಚ್ಚಾಗುತ್ತದೆ.
ವಿಷ್ಣುವಿನ ಸ್ತ್ರೋತ್ರ ವಿಷ್ಣು ಪಾರಾಯಣ ಮಾಡಿದರೆ ಒಳ್ಳೆಯದು.
ಕಟಕ: ಕಟಕ ರಾಶಿಯವರಿಗೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತೆ ಆಗುತ್ತದೆ ವಿನಾಕಾರಣ ಅಪವಾದಗಳು ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಧೈರ್ಯ ಕಡಿಮೆಯಾಗುವುದು ಭೂಮಿ ವಿಚಾರ ಮನೆ ತೆಗೆದುಕೊಳ್ಳುವ ವಿಚಾರದಲ್ಲಿ ಒಳ್ಳೆಯದಾಗುತ್ತದೆ ತಾಯಿಯ ಮೇಲೆ ಪ್ರೀತಿ ಹೆಚ್ಚಾಗುವುದು ತಾಯಿಯ ಆರೋಗ್ಯದಲ್ಲಿ ಸುಧಾರಿಸುವುದು ಮತ್ತು ಸಾಲಗಳು ಇನ್ನೂ ಹೆಚ್ಚಾಗುವುದು ಮನೆಯಳ್ಳಿ ಕಳ್ಳತನಗಳು ಆಗುವುದು.
ಸುಬ್ರಹ್ಮಣ್ಯನ ಆರಾಧೆ ಮತ್ತು ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ.
ಸಿಂಹ: ಸಿಂಹ ರಾಶಿಯವರಿಗೆ ನಾನಾರೀತಿ ಚಿಂತೆಗಳು ಶರೀರದಲ್ಲಿ ಅನಾರೋಗ್ಯ ಆಸ್ಪತ್ರೆಗೆ ಹೆಚ್ಚು ಖರ್ಚು ಹಣದ ವಿಚಾರದಲ್ಲಿ ಸಂಬಂಧಿಕರಿಂದ ದ್ವೇಷ ತಿರುಗಾಟ ಹೆಚ್ಚಾಗುವುದು ಆಸ್ತಿ ವಿಚಾರದಲ್ಲಿ ದಾಯಾದಿಗಳ ಕಲಹಗಳು ಪ್ರೀತಿ ಪ್ರೇಮವಿಚಾರದಲ್ಲಿ ಮೋಸವಾಗುವುದು ನಂತರ ಅಂದರೆ ವರ್ಷಾಂತ್ಯದಲ್ಲಿ ಶುಭಕರ ಮನೆ ಆಸ್ತಿ ವಾಹನಗಳು ತೆಗೆದುಕೊಳ್ಳುವುದು ವಿದ್ಯಾಭ್ಯಾಸ ಪರೀಕ್ಷೆಯಲ್ಲಿ ಉನ್ನತ ಅಂಕಗಳಿಸುವುದು.
ಶಿವನ ಪಂಚಾಕ್ಷರಿ ಮಂತ್ರವನ್ನು ತಪ್ಪದೆ ಪಠಿಸಿರಿ.

ಕನ್ಯಾ: ಕನ್ಯಾರಾಶಿಯವರಿಗೆ ಮೊದಲಿದ್ದ ಸಂತೋಷ ಸಂಭ್ರಮ ನಿಧಾನವಾಗಿ ಮರೆಯಾಗುವ ಸಾಧ್ಯತೆ ಹೆಚ್ಚು ಹಣವನ್ನು ವ್ಯಯಮಾಡುವುದು ಮನೆಯಲ್ಲಿ ಶುಭ ಕಾರ್ಯಗಳು ಜರಗುವುದು ಮತ್ತು ಮಕ್ಕಳಿಂದ ಶುಭ ಸುದ್ದಿಯನ್ನು ಕೇಳುವಿರಿ ಧಾರ್ಮಿಕ ಕ್ಷೇತ್ರದಲ್ಲಿ ಆಸಕ್ತಿತೋರುವುದು ನಿಮ್ಮ ನಿರ್ಧಾರ ಮತ್ತು ಮಾತನ್ನು ಎಲ್ಲಾರೂ ಒಪ್ಪುವರು ವಾಹನ ವಿಚಾರದಲ್ಲಿ ತೊಂದರೆಗಳು ಮತ್ತು ಅದರಿಂದ ನಷ್ಟವನ್ನು ಅನುಭವಿಸುವಿರಿ ಆಸ್ಥಿ ತೆಗೆದುಕೊಳ್ಳುವ ವಿಚಾರದಲ್ಲಿ ಎಚ್ಚರಿಕೆ ಅಗತ್ಯ
ಲಕ್ಷ್ಮೀನರಸಿಂಹ ದೇವರ ಆರಾಧನೆ ಬಹಳ ಮುಖ್ಯ.

ತುಲಾ: ತುಲಾ ರಾಶಿಯವರಿಗೆ ಹೆಚ್ಚು ಗೌರವಗಳು ಒಳ್ಳೆಯ ಅಭಿವೃದ್ದಿ ಕಾಣುವಿರಿ ವರ್ಷಾಂರಭದಲ್ಲಿ ಶ್ರೇಯಸ್ಸು ಶುಭಕಾರ್ಯಗಳು ಹೆಚ್ಚಾಗುವುದು ದೇವರು ಧರ್ಮಗಳ ಬಗ್ಗೆ ಆಸಕ್ತಿ ವಿದೇಶ ಪ್ರಯಾಣ ವಿದ್ಯಾಭ್ಯಾಸದಲ್ಲಿ ಶ್ರೇಯಸ್ಸು ಕಾಣುವಿರಿ ಆದರೆ ನಿಮ್ಮ ಸ್ವಂತ ಸಹೋದರ ಸಹೋದರಿಯರಿಂದ ನಿಮ್ಮ ಮನಸ್ಸಿಗೆ ನೋವಾಗುವುದು ಕ್ರೀಡಾವಿಚಾರದಲ್ಲಿ ಆಸಕ್ತಿ ಕಡಿಮೆಯಾಗುವುದು ಬಂಧುಬಾಂಧವರು ನಿಮ್ಮನ್ನು ದ್ವೇಷಿಸುವರು ಸ್ವಂತ ಜನರಿಂದ ಅಪವಾದಗಳು ಉಂಟಾಗುತ್ತದೆ.
ಗುರು ದೇವರನ್ನು ಆರಾಧನೆ ಮಾಡಿದರೆ ಒಳ್ಳೆಯದಾಗುತ್ತದೆ.

ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ವ್ಯಾಪಾರದಲ್ಲಿ ನಷ್ಟಭಯ ಕೆಲವು ಸಮಯದಲ್ಲಿ ಬೇಸರದಿಂದ ಇರುವಿರಿ ಕುಟುಂಬದಲ್ಲಿ ಅನೇಕ ತೊಂದರೆಗಳು ಮನೆಯಿಂದ ದೂರವಿರಲು ಮನಸ್ಸು ಬರಬಹುದು ಕೆಟ್ಟ ಮಾತುಗಳು ನಿಮ್ಮನ್ನು ಚಿಕ್ಕವರಾಗಿ ಮಾಡಬಹುದು ನಿಮ್ಮಮಾತಿಗೆ ಬೆಲೆಕೊಡದೆ ಇರುವುದು ದೃಷ್ಟಿದೋಷದಿಂದ ನರಳುತ್ತೀರಿ ಹಣವನ್ನು ಅನ್ಯಾಯಕ್ಕೆ ಖರ್ಚುಮಾಡಿ ನಂತರ ಪಶ್ಚಾತ್ತಾಪ ಪಡುವುದು ವರ್ಷಾಂತ್ಯದಲ್ಲಿ ಶುಭವಾಗುತ್ತದೆ.
ದುರ್ಗಾದೇವತೆ ಆರಾಧನೆ ಮತ್ತು ಪೂಜೆ ಮಾಡುವುದರಿಂದ ಒಳ್ಳೆಯದು.
ಧನಸ್ಸು: ಧನಸ್ಸು ರಾಶಿಯವರು ವರ್ಷಪೂರ್ತಿ ತುಸು ಕಷ್ಟ ಕಾರ್ಪಣ್ಯಗಳನ್ನು ಹೆದುರಿಸಬೇಕಾಗುತ್ತದೆ ಜನರಿಂದ ಮೋಸ ಅಪವಾದ ಹೆಚ್ಚಾಗುವುದು ಹಣಕಾಸಿನ ವಿಷಯದಲ್ಲಿ ಎಚ್ಚರಿಕೆವಹಿಸುವುದು ಅಗತ್ಯ ಕಾಲಿಗೆ ಸಂಬಂಧಿಸಿದ ರೋಗಗಳು ಹೆಚ್ಚಾಗುವುದು ಸ್ನೇಹಿತರಿಂದ ಅನೇಕ ಸಮಸ್ಸೆಗಳಿಗೆ ಸಹಾಯ ಪರಿಹಾರ ಆಗುತ್ತದೆ ನಿಷ್ಕಳಂಕ ಬುದ್ದಿಯನ್ನು ಎಲ್ಲರೊಂದಿಗೆ ತೋರುವಿರಿ
ಶನೇಶ್ಚರನ ಪೂಜೆ ಮತ್ತು ಆರಾಧನೆ ಮಾಡಬೇಕು.

ಮಕರ: ಮಕರ ರಾಶಿಯವರಿಗೆ ಹಿತ ಶತ್ರುಗಳು ಹೆಚ್ಚಾಗುವರು ತುಚ್ಚ ಜನಗಳ ಸ್ನೇಹವುಳ್ಳವರೂ ಹಣವನ್ನು ಅತಿರೇಕವಾಗಿ ವ್ಯಯ ಮಾಡುವಿರಿ ಗುಪ್ತವಾಗಿಯೇ ಎಲ್ಲಾ ಸಮಸ್ಸೆಗಳನ್ನು ಇಟ್ಟುಕೊಳ್ಳುವಿರಿ ಜನ್ಮ ಸ್ಥಳದಿಂದ ಬಹಳ ದೂರ ಹೋಗಿ ವಾಸ ಮಾಡುವಿರಿ ವೃತ್ತಿಯಲ್ಲಿ ಮೇಲಾಧಿಕಾರಿಗಳಿಂದ ಕಿರಿಕಿರಿ ಉಂಟಾಗುವುದು ವ್ಯವಹಾರದಲ್ಲಿ ಶುಭ ವಾಗಿ ಲಾಭ ಕಾಣುವಿರಿ ಸಾಡೇಸಾತಿ ಶನಿ ನಿಮಗೆ ಪ್ರರಂಭವಾಗಿದೆ.
ಆಂಜನೇಯನ ಸ್ತ್ರೋತ್ರ ಪಠಿಸಿ ಒಳ್ಳೆಯದಾಗುತ್ತದೆ.

ಕುಂಭ: ಕುಂಭ ರಾಶಿಯವರು ಈ ವರ್ಷ ಮಿಶ್ರ ಫಲವನ್ನು ಅನುಭವಿಸುವಿರಿ ವಾಯು ಸಂಬಂಧ ರೋಗಗಳು ಹೆಚ್ಚಾಗುವುದು ಮಂಡಿ ನೋವು ಪದೆ ಪದೆ ಕಾಡುವುದು ಕೆಟ್ಟ
ಸ್ನೇಹಿತರಿಂದ ದೂರ ಹೋಗುವುದೇ ಒಳ್ಳೆಯದು ವ್ಯವಹಾರದಲ್ಲಿ ಮನೆಯ ಹಿರಿಯರಿಗೆ ಆರೋಗ್ಯ ಸಮಸ್ಸೆ ಹೆಚ್ಚುವುದು ಹೊಸ ಪ್ರಯತ್ನದಿಂದ ಲಾಭ ಕಾಣುವಿರಿ ಆಧ್ಯಾತ್ಮ ವಿಚಾರದಲ್ಲಿ ಹೆಚ್ಚು ಆಸಕ್ತಿ ವಿದ್ಯಾಭ್ಯಾಸದಲ್ಲಿ ಉನ್ನತಿ ಮದುವೆ ಇನ್ನಿತರ ಶುಭಕಾರ್ಯಗಳು ನಡೆಯುವುದು ವಿದೇಶದಲ್ಲಿ ಇರುವವರು ಶುಭ ಸುದ್ದಿ ಕೊಡುವರು.
ಗಣಪತಿ ದೇವರ ಆರಾಧನೆ ಪೂಜೆ ಮಾಡಿವುದರಿಂದ ಒಳ್ಳೆಯದು.

ಮೀನ: ಮೀನ ರಾಶಿಯವರಿಗೆ ವೃತ್ತಿಗೆ ಸಂಚಕಾರ ಬೀಳಬಹುದು ಭೂಮಿ ಖರೀದಿ ವಿಷಯದಲ್ಲಿ ಮೋಸ ಮಕ್ಕಳ ವಿಚಾರದಲ್ಲಿ ದುಃಖ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತೆ ಆಗುವುದು ಅತಿ ಹಾಸೆಯಿಂದ ನಷ್ಟ ಅನುಭವಿಸುವುದು ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಬಹುದು ವಿದ್ಯಾಭ್ಯಾಸದಲ್ಲಿ ಕುಂಟಿತ ಕಾಣಬಹುದು ವ್ಯವಹಾರದಲ್ಲಿ ಸಾಧಾರಣ ಫಲವನ್ನು ಅನುಭವಿಸುವಿರಿ.
ಗುರು ರಾಘವೇಂದ್ರರ ಆರಾಧನೆ ಮಾಡಿ ಒಳ್ಳೆಯತಾಗುತ್ತದೆ.
ಇಟ್ಟಿಗೆ ಸೀಗೋಡು ಬಬ್ಬು ಸ್ವಾಮಿ ದೇವಸ್ಥಾನ ಜೀರ್ಣೋದ್ದಾರಕ್ಕೆ ನೆರವು- ಕಲ್ಮಕ್ಕಿ ಉಮೇಶ್ 

ಬಾಳೆಹೊನ್ನೂರಿನ ಇಟ್ಟಿಗೆ ಸೀಗೋಡಿನ ನಿರ್ಮಾಣ ಹಂತದಲ್ಲಿರುವ ಬಬ್ಲು ಸ್ವಾಮಿ ದೇವಸ್ಥಾನಕ್ಕೆ ಶಾಸಕ ಶ್ರೀ ಡಿ.ಎನ್.ಜೀವರಾಜ್ ರವರ ಸಲಹೆ ಸೂಚನೆಯಂತೆ ಆದಷ್ಟು ಬೇಗ ದೇವಸ್ಥಾನದ ಕಾಮಗಾರಿ ಮುಗಿಸಲು ಬೇಕಾದ ಆರ್ಥಿಕ ಸಹಾಯವನ್ನು ಬರಿಸುವುದಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಲ್ಮಕ್ಕಿ ಉಮೇಶ್ ಇಟ್ಟಿಗೆ ಸೀಗೋಡಿನ ಗ್ರಾಮಸ್ಥರು ಮತ್ತು ಬಬ್ಲು ಸ್ವಾಮಿ ದೇವಸ್ಥಾನದ ಕಮಿಟಿಯವರಿಗೆ ಬರವಸೆ ನೀಡಿದ್ದಾರೆ.

ಸುತ್ತಮುತ್ತ ಬಹುಸಂಖ್ಯೆಯಲ್ಲಿ ಭಕ್ತರನ್ನು ಹೊಂದಿರುವ ಬಬ್ಲು ಸ್ವಾಮಿ ದೇವಸ್ಥಾನ ಆದಷ್ಟು ಬೇಗ ಕಾಮಗಾರಿ ಮುಗಿಸಲು ಬೇಕಾದ ಆರ್ಥಿಕ ಸಹಾಯವನ್ನು ಭಕ್ತರನ್ನು ಒಳಗೊಂಡಂತೆ ನಾವು ಸಹ ಹೆಚ್ಚಿನ ದೇಣಿಗೆ ನೀಡಿ ಕಾಮಗಾರಿ ಮುಗಿಸುವುದಾಗಿ ಕಲ್ಮಕ್ಕಿ ಉಮೇಶ್ ನುಡಿದರು.
ಈ ಸಂಧರ್ಭದಲ್ಲಿ ಇಟ್ಟಿಗೆ ಸೀಗೋಡುವಿನ ಗ್ರಾಮಸ್ಥರು ಮತ್ತು ದೇವಸ್ಥಾನ ಕಮಿಟಿಯವರು  ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಮೊದಲಬಾರಿ ಗ್ರಾಮಕ್ಕೆ ಮತ್ತು ದೇವಸ್ಥಾನಕ್ಕೆ ಆಗಮಿಸಿದ ಕಲ್ಮಕ್ಕಿ ಉಮೇಶ್ ರವರನ್ನು ಊರಿನ ಪರವಾಗಿ ಅಭಿನಂದಿಸಿದರು.  ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾ ಮುಖಂಡ ಪ್ರಭಾಕರ್ ಪ್ರಣಸ್ವಿ, ಬಿಜೆಪಿ ಇಟ್ಟಿಗೆ ಸೀಗೋಡು ಮುಖಂಡ ಮಹೇಶ್ ಉಪಸ್ಥಿತರಿದ್ದರು

Tuesday 13 March 2018

2018 ಕರ್ನಾಟಕ ಚುನಾವಣೆಗೆ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ.


ಬೆಳಗಾವಿ ಜಿಲ್ಲೆ :

ನಿಪ್ಪಾಣಿ :ಜೊಲ್ಲೆ ಶಶಿಕಲಾ ಅಣ್ಣ ಸಾಹೇಬ್

ಚಿಕ್ಕೋಡಿ-ಸದಲಗಾ:

ಅಥಣಿ : ಲಕ್ಷ್ಮಣ್ ಸವದಿ

ಕಾಗವಾಡ : ಭರಮಗೌಡ ಕಾಗೆ

ರಾಯಭಾಗ್ : ಐಹೊಳೆ ದುರ್ಯೋಧನ

ಹುಕ್ಕೇರಿ : ರಮೇಶ್ ಕತ್ತಿ

ಅರಬಾವಿ : ಬಾಲಚಂದ್ರ ಜಾರಕಿಹೊಳಿ

ಯಮಕನರಡಿ : ಮಾರುತಿ ಮಲ್ಲಪ್ಪ

ಬೆಳಗಾವಿ(ದ) : ಅಭಯ್ ಪಾಟೀಲ್

ಸವದತ್ತಿ : ಆನಂದ್, ವಿಶ್ವನಾಥ್ ಮಾಮನಿ

ಬೈಲಹೊಂಗಲ : ಡಾ.ವಿಶ್ವನಾಥ್ ಪಾಟೀಲ್

ಕಿತ್ತೂರು : ಶಿವರುದ್ರಪ್ಪ ಮಾರೆಹಾಳ್

ಬೆಳಗಾವಿ (ಉ) : ಸಂಜಯ್ ಪಾಟೀಲ್

ರಾಮದುರ್ಗ : ಶಿವಲಿಂಗಪ್ಪ ಮಹದೇವಪ್ಪ

ಬೆಳಗಾವಿ(ಗ್ರಾಮಾಂತರ): ಖಾನಪೂರ

ಬೆಂಗಳೂರು ಜಿಲ್ಲೆ

ಮಲ್ಲೇಶ್ವರಂ : ಡಾ.ಅಶ್ವಥ್ ನಾರಾಯಣ್

ಯಲಹಂಕ : ಎಸ್.ಆರ್. ವಿಶ್ವನಾಥ್

ಹೆಬ್ಬಾಳ: ವೈ.ಎ.ನಾರಾಯಣಸ್ವಾಮಿ/ಕಟ್ಟಾಸುಬ್ರಹ್ಮಣ್ಯ ನಾಯ್ಡು

ರಾಜಾಜಿನಗರ : ಸುರೇಶ್ ಕುಮಾರ್

ಮಹಾಲಕ್ಷ್ಮಿಲೇಔಟ್ : ಎಂ.ನಾಗರಾಜ್/ಹರೀಶ್

ವಿಜಯನಗರ : ರವೀಂದ್ರ/ ಅಶ್ವಥ್ ನಾರಾಯಣ

ಗೋವಿಂದರಾಜನಗರ: ಉಮೇಶ್ ಶೆಟ್ಟಿ

ಪದ್ಮನಾಭನಗರ : ಆರ್.ಅಶೋಕ್



ಬಸವನಗುಡಿ : ರವಿಸುಬ್ರಹ್ಮಣ್ಯ

ದಾಸರಹಳ್ಳಿ :ಮುನಿರಾಜು

ಬೊಮ್ಮನಹಳ್ಳಿ : ಸತೀಶ್ ರೆಡ್ಡಿ

ಕೆ.ಆರ್.ಪುರಂ : ನಂದೀಶ್ ರೆಡ್ಡಿ

ಸರ್.ಸಿ.ವಿ.ರಾಮನ್ ನಗರ : ರಘು

ಶಿವಾಜಿನಗರ : ನಿರ್ಮಲ್ ಕುಮಾರ ಸುರಾನ/ಶರವಣ

ಜಯನಗರ : ವಿಜಯಕುಮಾರ್

ಬೆಂಗಳೂರು(ದ) : ಎಂ.ಕೃಷ್ಣಪ್ಪ

ಆನೇಕಲ್ : ನಾರಾಯಣಸ್ವಾಮಿ

ಮಹದೇವಪುರ : ಅರವಿಂದ ಲಿಂಬಾವಳಿ

ಸರ್ವಜ್ಞನಗರ : ಪದ್ಮನಾಭ ರೆಡ್ಡಿ

ರಾಜರಾಜೇಶ್ವರಿನಗರ : ಶಾಂಭವಿ ಎಸ್.ಎಂ.ಕೃಷ್ಣ

ಬ್ಯಾಟರಾಯನಪುರ : ಎ.ರವಿ

ಶಾಂತಿನಗರ : ಶ್ರೀನಿವಾಸ ಮೂರ್ತಿ



ಬೆಂಗಳೂರು ಗ್ರಾಮಾಂತರ ಜಿಲ್ಲೆ:

ನೆಲಮಂಗಲ : ನಾಗರಾಜು

ದೇವನಹಳ್ಳಿ : ಚಂದ್ರಪ್ಪ

ಹೊಸಕೋಟೆ : ಬಚ್ಚೇಗೌಡ

ದೊಡ್ಡಬಳ್ಳಾಪುರ : ನರಸಿಂಹಸ್ವಾಮಿ

ರಾಮನಗರ ಜಿಲ್ಲೆ

ರಾಮನಗರ: ಜಗದೀಶ್ ಗೌಡ

ಚನ್ನಪಟ್ಟಣ: ಸಿ ಪಿ ಯೋಗೀಶ್ವರ್



ಬಾಗಲಕೋಟೆ ಜಿಲ್ಲೆ

ಮುದೋಳ : ಗೋವಿಂದ ಕಾರಜೋಳ

ತೇರದಾಳ : ಶಂಕರ್ ಬಿದರಿ/ಸಿದ್ದು ಸವದಿ

ಜಮಖಂಡಿ : ಶ್ರೀಕಾಂತ್ ಕುಲಕರ್ಣಿ/ಮುರುಗೇಶ್ ನಿರಾಣಿ

ಬೀಳಗಿ : ಮುರುಗೇಶ್ ನಿರಾಣಿ

ಬಾದಾಮಿ : ಎಂಕೆ ಪಟ್ಟಣಶೆಟ್ಟಿ

ಬಾಗಲಕೋಟೆ : ಈರಣ್ಣ ಚರಂತಿಮಠ

ಹುನಗುಂದ : ದೊಡ್ಡಣ್ಣ ಗೌಡ ಪಾಟೀಲ್

ವಿಜಯಪುರ

ಬಸವನಬಾಗೇವಾಡಿ: ಎಸ್.ಕೆ. ಬೆಳ್ಳುಬ್ಬಿ,



ಬಿಜಾಪುರ ನಗರ :ಅಪ್ಪು ಪಟ್ಟಣ ಶೆಟ್ಟಿ

ಇಂಡಿ : ರವಿಕಾಂತ್ ಪಾಟೀಲ್

ಸಿಂದಗಿ : ಬೂಸನೂರು ರಮೇಶ್.

ಕಲಬುರುಗಿ

ಅಫ್ಜಲ್ ಪುರ – ಎಂ.ವೈ. ಪಾಟೀಲ್,

ಜೇವರ್ಗಿ – ದೊಡ್ಡಪ್ಪ ನರಿಬೋಳ,

ಚಿತ್ತಾಪೂರ-ವಾಲ್ಮೀಕಿ ನಾಯಕ್,

ಸೇಡಂ- ರಾಜಕುಮಾರ್ ಪಾಟೀಲ್

ಚಿಂಚೋಳಿ-ಸುನಿಲ್ ವಲ್ಯಾಪುರ

ಗುಲಬರ್ಗಾ ಗ್ರಾಮಾಂತರ-ರೇವು ನಾಯಕ್ ಬೆಳಮಗಿ

ಗುಲಬರ್ಗಾ ದಕ್ಷಿಣ- ದತ್ತಾತ್ರೇಯ ಸಿ.ಪಾಟೀಲ್ ರೇವುರ

ಗುಲಬರ್ಗಾ ಉತ್ತರ- ನಾಸೀರ್ ಹುಸೇನ್ ಉಸ್ತಾದ್



ರಾಯಚೂರು:

ರಾಯಚೂರು(ಗ್ರಾ)- ತಿಪ್ಪರಾಜು,

ರಾಯಚೂರು-ಶಿವರಾಜ್ ಪಾಟೀಲ್

ದೇವದುರ್ಗ -ಕೆ.ಶಿವನಗೌಡ ನಾಯಕ್,

ಲಿಂಗಸುಗೂರು-ಮಾನಪ್ಪ ವಜ್ಜಲ್

ಗದಗ:

ಗದಗ : ಅನಿಲ್ ಪ್ರಕಾಶ್ ಬಾಬು ಮೆಣಸಿನಕಾಯಿ

ಶಿರಹಟ್ಟಿ -ರಾಮಪ್ಪ ಲಮಾಣಿ,

ರೋಣ -ಕಳಕಪ್ಪ ಬಂಡಿ,

ನರಗುಂದ – ಸಿ.ಸಿ.ಪಾಟೀಲ್,



ಧಾರವಾಡ:

ನವಲಗುಂದ -ಪಾಟೀಲ್ ಮುನೇನಕೊಪ್ಪ ಶಂಕರ್,

ಹುಬ್ಬಳಿ-ಧಾರವಾಡ (ಪೂರ್ವ) -ವೀರಭದ್ರಪ್ಪ ಹಾಲ ಅರವಿ

ಹುಬ್ಬಳ್ಳಿ-ಧಾರವಾಡ (ಕೇಂದ್ರ)-ಜಗದೀಶ್ ಶೆಟ್ಟರ್

ಹುಬ್ಬಳ್ಳಿ-ಧಾರವಾಡ(ಪಶ್ಚಿಮ)- ಅರವಿಂದ್ ಚಂದ್ರಕಾಂತ್ ಬೆಲ್ಲದ್

ಉತ್ತರ ಕನ್ನಡ

ಹಳಿಯಾಳ : ಸುನೀಲ್ ಹೆಗ್ಡೆ

ಸಿರಸಿ : ವಿಶ್ವೇಶ್ವರ ಹೆಗಡೆ ಕಾಗೇರಿ

ಭಟ್ಕಳ : ಶಿವಾನಂದ್ ನಾಯಕ್

ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ನಗರ: ಕೆ.ಎಸ್. ಈಶ್ವರಪ್ಪ,

ಶಿಕಾರಿಪುರ : ಬಿ.ಎಸ್.ಯಡಿಯೂರಪ್ಪ,

ತೀರ್ಥಹಳ್ಳಿ : ಅರಗ ಜ್ಞಾನೇಂದ್ರ,

ಸಾಗರ : ಕುಮಾರ್ ಬಂಗಾರಪ್ಪ



ದಾವಣಗೆರೆ ಜಿಲ್ಲೆ

ಹೊನ್ನಾಳಿ : ಎಂ.ಪಿ. ರೇಣುಕಾಚಾರ್ಯ,

ಚನ್ನಗಿರಿ :ಮಾಡಾಳು ವಿರುಪಾಕ್ಷಪ್ಪ,

ಹರಿಹರ : ಬಿ.ಪಿ.ಹರೀಶ್,

ಹರಪನಹಳ್ಳಿ : ಕರುಣಾಕರ ರೆಡ್ಡಿ,

ಜಗಳೂರು : ಎಸ್.ವಿ. ರಾಮಚಂದ್ರ,

ಮಾಯಕೊಂಡ : ಬಸವರಾಜು ನಾಯಕ್,

ದಾವಣಗೆರೆ(ಉ) : ಎಸ್.ಎ. ರವೀಂದ್ರನಾಥ್,

ದಾವಣಗೆರೆ(ದ) : ಅರವಿಂದ್ ಜಾಧವ್.

ಬಳ್ಳಾರಿ

ಬಳ್ಳಾರಿ ನಗರ: ಡಾ. ಬಿ.ಕೆ ಸುಂದರ್

ಕಂಪ್ಲಿ : ಸುರೇಶ್ ಬಾಬು

ಹಗರಿಬೊಮ್ಮನಹಳ್ಳಿ : ನೇಮಿರಾಜ ನಾಯಕ್

ಶಿರಗುಪ್ಪ : ಎಂ.ಎಸ್.ಸೋಮಲಿಂಗಪ್ಪ,

ಹೂವಿನಡಗಲಿ : ಚಂದ್ರನಾಯಕ್.



ಚಿತ್ರದುರ್ಗ ಜಿಲ್ಲೆ

ಚಿತ್ರದುರ್ಗ: ತಿಪ್ಪಾರೆಡ್ಡಿ

ಮೊಳಕಾಲ್ಮೂರು : ಎಸ್.ತಿಪ್ಪೇಸ್ವಾಮಿ

ಚಳ್ಳಕೆರೆ : ಕೆ.ಟಿ.ಕುಮಾರಸ್ವಾಮಿ

ಹೊಳಲ್ಕೆರೆ : ಎಂ.ಚಂದ್ರಪ್ಪ

ಹೊಸದುರ್ಗ: ಗೂಳಿಹಟ್ಟಿ ಶೇಖರ್

ಉಡುಪಿ ಜಿಲ್ಲೆ

ಉಡುಪಿ – ಬಿ.ಸುಧಾಕರ್ ಶೆಟ್ಟಿ /ರಘುಪತಿ ಭಟ್,

ಕುಂದಾಪುರ – ಹಾಲಾಡಿ ಶ್ರೀನಿವಾಸ್ ಶೆಟ್ಟಿ,

ಬೈಂದೂರು – ಜಯಪ್ರಕಾಶ್ ಹೆಗ್ಡೆ,

ಕಾಪು – ಲಾಲ್ ಜಿ ಆರ್.ಮೆಂಡನ್,

ಕಾರ್ಕಳ – ಸುನೀಲ್ ಕುಮಾರ್.



ಚಿಕ್ಕಮಗಳೂರು ಜಿಲ್ಲೆ

ಚಿಕ್ಕಮಗಳೂರು : ಸಿ.ಟಿ. ರವಿ,

ಶೃಂಗೇರಿ : ಡಿ.ಎನ್. ಜೀವರಾಜ್,

ಮೂಡಿಗೆರೆ : ಎಂ.ಪಿ. ಕುಮಾರಸ್ವಾಮಿ,

ತರೀಕೆರೆ : ಸುರೇಶ್,

ಕಡೂರು : ಬೆಳ್ಳಿ ಪ್ರಕಾಶ್

ದಕ್ಷಿಣ ಕನ್ನಡ ಜಿಲ್ಲೆ

ಸುಳ್ಯ – ಅಂಗಾರ,

ಬಂಟ್ವಾಳ – ರಾಜೇಶ್ ನಾಯ್ಕ್ ,

ಪುತ್ತೂರು – ಅರುಣ್ ಪುತ್ತಿಲ

ಬೆಳ್ತಂಗಡಿ – ಹರೀಶ್ ಪೂಂಜ,

ಮಂಗಳೂರು ನಗರ ಉತ್ತರ -ಸತ್ಯಜೀತ್ ಸುರತ್ಕಲ್

ಮಂಗಳೂರು ನಗರ ದಕ್ಷಿಣ- .ಬದ್ರಿನಾಥ್ ಕಾಮತ್

ಮೂಡಬಿದ್ರೆ :ಉಮಾನಾಥ್ ಕೋಟ್ಯಾನ್

ಕೊಡಗು ಜಿಲ್ಲೆ

ಮಡಿಕೇರಿ : ಅಪ್ಪಚ್ಚು ರಂಜನ್,

ವಿರಾಜಪೇಟೆ – ಕೆ.ಜಿ.ಬೋಪಯ್ಯ

ಚಾಮರಾಜನಗರ ಜಿಲ್ಲೆ

ಚಾಮರಾಜನಗರ : ಪ್ರೊ. ಮಲ್ಲಿಕಾರ್ಜುನಯ್ಯ,

ಹನೂರು : ವಿ.ಸೋಮಣ್ಣ,

ಕೊಳ್ಳೇಗಾಲ : ನಂಜುಂಡಸ್ವಾಮಿ,

ಗುಂಡ್ಲುಪೇಟೆ :ನಿರಂಜನ್ ಕುಮಾರ್

ತುಮಕೂರು ಜಿಲ್ಲೆ ಅಭ್ಯರ್ಥಿಗಳು

ತುಮಕೂರು ಗ್ರಾಮಾಂತರ- ಸುರೇಶ್ ಗೌಡ,

ತುಮಕೂರು ನಗರ – ಜ್ಯೋತಿ ಗಣೇಶ್ /ಶಿವಣ್ಣ,

ಚಿಕ್ಕನಾಯಕನಹಳ್ಳಿ – ಜೆ.ಮಾದುಸ್ವಾಮಿ,

ಶಿರಾ – ಕಿರಣ್ ಕುಮಾರ್,

ತಿಪಟೂರು – ಬಿ.ಸಿ.ನಾಗೇಶ್,

ಕುಣಿಗಲ್ – ಕೃಷ್ಣಮೂರ್ತಿ,

ತುರುವೇಕೆರೆ – ಮಸಾಲೆ ಜಯರಾಮ್.



ಚಿಕ್ಕಬಳ್ಳಾಪುರ ಜಿಲ್ಲೆ

ಬಾಗೇಪಲ್ಲಿ: ಜ್ಯೋತಿ ರೆಡ್ಡಿ,

ಚಿಂತಾಮಣಿ: ಎಂ.ಸಿ.ಸುಧಾಕರ್,

ಮೈಸೂರು ಜಿಲ್ಲೆ

ವರುಣಾ ; ಕಾಪು ಸಿದ್ದಲಿಂಗಸ್ವಾಮಿ

ಕೃಷ್ಣರಾಜನಗರ : ಎಸ್.ಎ. ರಾಮದಾಸ್

ಹುಣಸೂರು : ಮಂಜುನಾಥ್

ಮಂಡ್ಯ ಜಿಲ್ಲೆ

ಶ್ರೀರಂಗಪಟ್ಟಣ :ನಂಜುಂಡೇಗೌಡ

ಮದ್ದೂರು : ಲಕ್ಷ್ಮಣ್ ಕುಮಾರ್

ಮಂಡ್ಯ : ಸಿದ್ದರಾಜುಗೌಡ (ರಾಸಿ)

ಮಳವಳ್ಳಿ : ಬಿ.ಸೋಮಶೇಖರ್

ಕೆ. ಆರ್ ಪೇಟೆ : ಅರವಿಂದ್

ನಾಗಮಂಗಲ : ಕಿಶನ್ ಗೌಡ

ಮೇಲುಕೋಟೆ : ಬಾಲಕೃಷ್ಣ ಗುರೂಜಿ

ಹಾವೇರಿ ಜಿಲ್ಲೆ :

ಹಾವೇರಿ – ನೆಹರು ಓಲೇಕರ್,

ಹಾನಗಲ್ – ಸಿ.ಎಂ.ಉದಾಸಿ,

ಶಿಗ್ಗಾವಿ – ಬಸವರಾಜ ಬೊಮ್ಮಾಯಿ,

ಬ್ಯಾಡಗಿ – ಶಿವರಾಜ್ ಸಜ್ಜನರ,

ಹಿರೇಕೆರೂರು -ಬಣಕಾರ್.

ಯಾದಗಿರಿ

ಯಾದಗಿರಿ : ವೀರಬಸಂತ್ ರೆಡ್ಡಿ,

ಶಹಾಪುರ : ಗುರುಪಾಟೀಲ್ ಶಿರವಾಳ್,

ಕೋಲಾರ

ಕೆಜಿಎಫ್: ರಾಮಕ್ಕ

ಬಂಗಾರಪೇಟೆ: ನಾರಾಯಣಸ್ವಾಮಿ
ಜೀವರಾಜ್ ವಾಕ್ಚಾತುರ್ಯಕೆ ಬೆವರಿದ ಕಾಂಗ್ರೇಸ್.. ಕೋಲು ಕೊಟ್ಟು ಹೊಡೆತ ತಿಂದ ಕಾಂಗ್ರೇಸ್ ಮುಖಂಡರು
ಶೃಂಗೇರಿ ಕ್ಷೇತ್ರ ನ್ಯೂಸ್ ಮಾರ್ಚ್ 13.
ಇಂದು ಬಾಳೆಹೊನ್ನೂರಲ್ಲಿ ಎ.ಪಿ.ಎಂ.ಸಿ ಮುಂದಾಳತ್ವದಲ್ಲಿ ಬಾಳೆಹೊನ್ನೂರು ಸಂತೆ ಮಾರುಕಟ್ಟೆ ಉದ್ಘಾಟನಾ ಕಾರ್ಯಕ್ರಮ. ಕಾಂಗ್ರೇಸ್ ಮುಖಂಡರುಗಳದ್ದೇ ಪಾರುಪತ್ಯವಾಗಿದ್ದರು ಬಾಳೆಹೊನ್ನೂರಿನ ಅಭಿವೃದ್ಧಿ ದೃಷ್ಟಿಯನ್ನು ಮನಗಂಡು ಪ್ರೋಟೋಕಾಲ್ ಪ್ರಕಾರ ಜೀವರಾಜ್ ಸಹ ಆಗಮಿಸಿದ್ದರು. ಬಾರಿ ಪ್ರಚಾರದ ಈ ಕಾರ್ಯಕ್ರಮಕ್ಕೆ ಬಂದಿದ್ದು ಬೆರಳೆಣಿಕೆಯಷ್ಟು ಜನ ಮಾತ್ರ. ಅಂತೂ ಇಂತೂ ಮಾರುಕಟ್ಟೆ ಉದ್ಘಾಟನೆ ಗೊಂಡಿತು. ತದ ನಂತರ ನೆಡೆದ ಸಭಾ ಕಾರ್ಯಕ್ರಮದಲ್ಲಿ ಹೇಗಾದರೂ ಮಾಡಿ ಜೀವರಾಜ್ ರವರಿಗೆ ಮುಖಬಂಗ ಮಾಡಬೇಕೆನ್ನುವುದು ಕಾಂಗ್ರೇಸ್ ನ ಪೂರ್ವ ನಿಯೋಜಿತ ಹಳೆಚಾಳಿ ಇರಬಹುದೇನೋ ಎಂಬಂತೆ ಪತ್ರಿಕೆಯಲ್ಲಿ ಹೆಸರಿರದಿದ್ದರೂ ವೇದಿಕೆಯಲ್ಲಿ ಮಾತನಾಡಲು ಕಾಂಗ್ರೇಸ್ ಮುಖಂಡರೋರ್ವರು ಬಂದರು. ಬಂದವರು ಸುಮ್ಮನಿರಲಾರದೇ ವೇದಿಕೆಯಲ್ಲಿ ಹಾಕಿರುವ ಪ್ಲೆಕ್ಸ್ ನಲ್ಲಿ ಜೀವರಾಜ್ ಭಾವಚಿತ್ರವಿರುವುದನ್ನು ಆಕ್ಷೇಪಿಸಿ ಅ ಚಿತ್ರದ ಬದಲು ಎಪಿಎಂಸಿ ಅಧ್ಯಕ್ಷರ ಚಿತ್ರ ಇರಬೇಕೆಂದು ಖ್ಯಾತೆ ತೆಗೆದು ತಮ್ಮ ಮಾತನ್ನು ಮುಗಿಸಿದರು.
ನಂತರ ಜೀವರಾಜ್ ತಮ್ಮ ಎಂದಿನ ಶೈಲಿಯಲ್ಲಿಯೇ ಮಾತನಾಡಲು ಶುರು ಮಾಡಿದ ಅವರು ಅಭಿಮಾನದಿಂದ ನನ್ನ ಭಾವ ಚಿತ್ರ ಹಾಕಿರುವುದಕ್ಕೆ ನಾನೇನು ಹೇಳಲಾರೇ ಹಾಗಂತ ನನ್ನ ಭಾವಚಿತ್ರ ಹಾಕದಿದ್ದರೂ ನಾನು ಆಕ್ಷೇಪಿಸುತ್ತಿರಲಿಲ್ಲ . ನಾನು ಎ.ಪಿ.ಎಂ.ಸಿ ಯವರ ಹಾಗೂ ಸ್ಥಳಿಯ ಬಾಳೆಹೊನ್ನೂರಿನ ಜನತೆಯ ಅಭಿಮಾನದ ಅಹ್ವಾನದ ಮೇಲೆ ಇಲ್ಲಿ ಆಗಮಿಸಿರುವೆ ಎಂದು ಉತ್ತರಿಸಿ ಪತ್ರಿಕೆಯಲ್ಲಿ ಹೆಸರಿರದಿದ್ದರೂ ವೇದಿಕೆಯನ್ನೇರಿ ಭಾಷಣ ಮಾಡಿದ ಕಾಂಗ್ರೇಸ್ ಮುಖಂಡನಿಗೆ ಸರ್ವಜ್ಜನ ವಚನವಾದ
ಕರೆಯದೇ ಬರುವವನ
ಬರಿಗಾಲಲ್ಲಿ ನೆಡೆಯುವವನ
ಕರೆದು ಕೆರದಲ್ಲಿ ಹೊಡೆಯಬೇಕೆಂದ ಸರ್ವಜ್ಜ
 ಎಂಬ ವಚನವನ್ನು ಹೇಳಿ ಪತ್ರಿಕೆಯಲ್ಲಿ ಹೆಸರಿರದಿದ್ದರೂ ಬಂದು ಅನಗತ್ಯ ಗೊಂದಲ ಮಾಡಲು ಉದ್ದೇಶಿಸಿದ ಕಾಂಗ್ರೇಸ್ ಮುಖಂಡನ ಮುಖದಲ್ಲಿ ಬೆವರಿಳಿಸಿದರು ಜೀವರಾಜ್ ರವರ ಈ ಕೌಂಟರ್ ಅಟ್ಯಾಕ್ ನೀರಿಕ್ಷಿಸದ ಕಾಂಗ್ರೇಸಿಗರ ಸ್ಥಿತಿ ಕೋಲು ಕೊಟ್ಟು ಪೆಟ್ಟು ತಿಂದಂತಾಗಿತ್ತು.
ಭಾಷಣ ಮುಗಿಸಿ ಜೀವರಾಜ್ ಹೋರಟಾಗ ಇಡೀ ಸಭಾಂಗಣವೇ ಅರ್ಧಕರ್ಧ ಖಾಲಿಯಾಗಿ ಜನ ಶಬ್ಬಾಸ್ ಜೀವರಾಜ್ ಎಂದು ಅವರಿಂದೇಯೇ ಹೊರನೆಡೆದರು. ಒಟ್ಟಾರೆ ಕಾಂಗ್ರೇಸಿಗರ ಸ್ಥಿತಿ ಇಂಗು ತಿಂದ ಮಂಗನಂತಾಗಿದ್ದು ವಿಪರ್ಯಾಸ ಮತ್ತು ಸತ್ಯ.

Friday 9 March 2018

10-3-2018 ಶನಿವಾರ ಜೀವರಾಜ್ ರಸ್ತೆ ಬಂದ್..

ಬಾಳೆಹೊನ್ನೂರಿನಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಅನುದಾನದಲ್ಲಿ ಶಾಸಕ ಡಿ.ಎನ್ ಜೀವರಾಜ್ ರವರ ಅಭಿವೃದ್ಧಿ ದೃಷ್ಠಿಕೋನದಲ್ಲಿ ಬಾಳೆಹೊನ್ನೂರಿನ ಇತಿಹಾಸದಲ್ಲಿಯೇ ಅತಿದೊಡ್ಡಮೊತ್ತದ ಕಾಮಗಾರಿಯಾದ ಜೆಸಿ ಸರ್ಕಲ್ ನಿಂದ ಚೌಡಿಕೆರೆವರೆಗಿನ ಕಾಂಕ್ರೀಟ್ ರಸ್ತೆ ಅರ್ಥಾತ್ ಜೀವರಾಜ್ ರಸ್ತೆ ಯಲ್ಲಿರುವ ಇತಿಹಾಸ ಪ್ರಸಿದ್ಧಡೋಬಿಹಳ್ಳಕ್ಕೆ ಬೃಹದಾಕಾರವಾದ ಭೀಮ್ ಜೋಡಣೆ ಕಾರ್ಯವಿರುವುದರಿಂದ  ಬೆಳಿಗ್ಗೆ 5ಗಂಟೆಯಿಂದ ಸಾಯಂಕಾಲದವರೆಗೂ ಯಾವುದೇ ವಾಹನ ಪರ್ಯಾಯ ರಸ್ತೆಯಲ್ಲಿ ಸಂಚರಿಸುವಂತಿಲ್ಲ ಎಂದು ನ್ಯಾಷನಲ್ ಕನ್ಸ್ಟ್ರಕ್ಷನ್ ನ ಸೈಟ್ ಎಂಜಿನಿಯರ್ ಬ್ಲಾಗ್ ಗೆ ತಿಳಿಸಿದ್ದಾರೆ. ಆದರೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರತಿ ಎರೆಡುಗಂಟೆಗೊಮ್ಮೆ ವಾಹನಗಳನ್ನು ಬಿಡಲಾಗುವುದು ಎಂದು ತಿಳಿಸಿದ್ದಾರೆ.

ಡೋಬಿಹಳ್ಳಕ್ಕೆ ನಿರ್ಮಿಸುತ್ತಿರುವ ಹೊಸ ಸೇತುವೆಗೆ ಸುಮಾರು 45ಅಡಿ ಉದ್ದ 2ಅಡಿ ದಪ್ಪ 4.5ಅಡಿ ಎತ್ತರದ ಬೃಹತ್ ಆದ 4ಭೀಮ್ ಗಳನ್ನು ಬೃಹದಾಕಾರದ 2 ಕ್ರೇನ್ ಮೂಲಕ ಜೋಡಿಸುವ ಕಾರ್ಯ ಶನಿವಾರ ನೆಡೆಯಲಿದ್ದು ಮುಂಜಾಗ್ರತ ದೃಷ್ಠಿಯಿಂದ ವಾಹನ ಸಂಚಾರ ನಿರ್ಭಂದ ಅನಿವಾರ್ಯ ಎಂದು ಬ್ಲಾಗ್ ಗೆ ತಿಳಿಸಿದ್ದಾರೆ.
ಈಗಾಗಲೇ ಭೀಮ್ ಗಳು ರೆಡಿಯಾಗಿದ್ದು ಭೀಮ್ ಜೋಡಣೆಗೆ ಸಕಲ ಸಿದ್ಧತೆಗಳು ನೆಡೆದಿದ್ದು ಬಲು ಅಪರೂಪದ ಈ ಜೋಡಣೆ ಕಾರ್ಯ ನೋಡಲು ಜನತೆ ಕಾತುರರಾಗಿರುವುದರಿಂದ ಪೋಲಿಸ್ ಇಲಾಖೆ ಹೆಚ್ಚಿನ ಸಿಬ್ಭಂದಿಯೊಂದಿಗೆ ಬಂದೋಬಸ್ದ್ ನ ಕೈಗೊಳ್ಳ ಬೇಕಾಗಬಹುದು. ಅದೇ ರೀತಿ ಶನಿವಾರದ ದಿನ ಆದಷ್ಟು ಬಾಳೆಹೊನ್ನೂರಿಗೆ ಬರುವವರು ದ್ವಿಚಕ್ರವಾಹನ ಬಳಸಿದರೇ ಹೆಚ್ಚಿನ ವಾಹನ ದಟ್ಟಣೆಯಿಂದ ಆಗಬಹುದಾದ ಪರಿತಾಪವನ್ನು ತಪ್ಪಿಸಿಕೊಳ್ಳಬಹುದು.

Monday 5 March 2018

ಕಾಂಗ್ರೇಸ್ ಟಿಕೇಟ್ ಒಂದು - ಮೂರು ಬಾಗಿಲು...
ಶೃಂಗೇರಿ  ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿದ ಸಚಿನ್ ಮಿಗ: ಮೇಲ್ನೋಟಕ್ಕೆ ಕಾಂಗ್ರೇಸ್ ನಲ್ಲಿ ಭಿನ್ನಮತ?


ಅಂತೂ ಇಂತೂ ಕಾಂಗ್ರೇಸ್ ನ ಶೃಂಗೇರಿ ಅಭ್ಯರ್ಥಿಯಾಗಿ ಸದಾಕಾಲ ಪಕ್ಷ ಸಂಘಟನೆಯಲ್ಲಿ ಮುಂಚುಣಿ ನಾಯಕರಾಗಿರುವ ಯುವ ಮುಂದಾಳು ಸಚಿನ್ ಮಿಗ ಕೆ.ಪಿ.ಸಿ.ಸಿ ಗೆ   ಅರ್ಜಿ ಸಲ್ಲಿಸಿದ್ದು ಶೃಂಗೇರಿ ಕ್ಷೇತ್ರದ ರಾಜಕೀಯ ಚಿತ್ರಣ ಸಂಪೂರ್ಣ ಗರಿಗೆದರಿದಂತಾಗಿದ್ದು ಕಾಂಗ್ರೇಸ್ ನಲ್ಲಿ ಅಭ್ಯರ್ಥಿ ಆಯ್ಕೆ ಕಸರತ್ತು ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದು ಸದ್ಯ ರಸ್ತೆಗಳಲ್ಲಿ ಚರ್ಚೆ ಮಟ್ಟಕ್ಕೆ ಬಂದಿದ್ದು ಆ ಪಕ್ಷದ ಹೈ ಕಮಾಂಡ್ ಯಾರಿಗೆ ಟಿಕೇಟ್ ನೀಡುತ್ತಾರೆಂಬುದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಇನ್ನೂ ಹಾಲಿ ಸಚಿನ್ ಮಿಗ ಚುನಾವಣೆ ಇರಲಿ ಇಲ್ಲದಿರಲಿ ಪಕ್ಷ ಸಂಘಟನೆಯಲ್ಲಿ ಸದಾಕಾಲ ತೊಡಗಿರುವ ನಮ್ಮನ್ನೇ ಹೈ ಕಮಾಂಡ್ ಅಭ್ಯರ್ಥಿಯನ್ನಾಗಿಸುತ್ತಾರೆಂಭ ಭರವಸೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇನ್ನೂ ಕಳೆದ ಎರೆಡೂ ಬಾರಿ ಪರಾಜಿತ ಅಭ್ಯರ್ಥಿ ಟಿ.ಡಿ.ಆರ್ ಅವರು ಸಹ ಕಳೆದ 1ವರ್ಷಗಳಿಂದ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದು ಅವರು ಸಹ ಟಿಕೇಟ್ ಆಕಾಂಕ್ಷಿಯಾಗಿದ್ದು ಇನ್ನೂ ಇವರೆಲ್ಲರಿಗಿಂತ ಭಿನ್ನ ವ್ಯಕ್ತಿತ್ವದ ಆರತಿ ಕೃಷ್ಣರವರು ದಿಲ್ಲಿಯಲ್ಲಿ ಹಾಗೂ ರಾಜ್ಯದ ಪ್ರಭಾವಿ ಮುಖಂಡರ ಒಡನಾಟವಿದ್ದು ದಿಲ್ಲಿ ದೊರೆಗಳ ಕೃಪಾಶೀರ್ವಾದ ಮತ್ತು ತಮ್ಮ ತಂದೆಯವರ ನಾಮಬಲದಿಂದ ಕೊನೆಗಳಿಗೆಯಲ್ಲಿ ಟಿಕೇಟ್ ತಂದರೂ ಆಶ್ಚರ್ಯ ಪಡಬೇಕಾಗಿಲ್ಲ. ಒಟ್ಟಾರೆ ಕಾಂಗ್ರೇಸ್ ಒಗ್ಗಾಟ್ಟುಗುವ ಸಮಯದಲ್ಲಿ ಟಿಕೇಟ್ ಒಂದು ಮೂರು ಬಾಗಿಲು  ಆಗಿರುವುದು ಸದ್ಯದ ಕ್ಷೇತ್ರದ ಚಿತ್ರಣ.
ಕಾಂಗ್ರೇಸ್ ಗೆ ಗುಡ್ ಬೈ ಹೇಳಿದ ಬನ್ನೂರು ಉಪಾಧ್ಯಕ್ಷೆ.

ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಬನ್ನೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಶಾಮಲ ನಾರಾಯಣ ಗೌಡ ಬಿಜೆಪಿಗೆ ಸೇರ್ಪಡೆ.
ಬಾಳೆಹೊನ್ನೂರು. ಬೆಳಿಗ್ಗೆಯಿಂದ ಪಂಚಾಯ್ತಿ ಚುನಾವಣೆ ಬಿರುಸಿನಿಂದ ಸಾಗಿ ಕಾಂಗ್ರೇಸ್ ಬೆಂಬಲಿತ ಅಧ್ಯಕ್ಷರಾಗಿ  ಟಿ.ಎಂ.ವೆಂಕಟೇಶ್ ಮತ್ತು ಉಪಾಧ್ಯಕ್ಷರಾಗಿ ಶಾಮಲನಾರಾಯಣ ಗೌಡ ಆಯ್ಕೆಯಾಗಿ ಪಂಚಾಯ್ತಿ ಎದುರು ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂಭ್ರಮ ಕಾಂಗ್ರೇಸ್ ನಲ್ಲಿ ಬಹಳಕಾಲ ಉಳಿಯಲಿಲ್ಲ.
ಶಾಮಲ ಯು ಟರ್ನ್:
ಸಂಭ್ರಮಿಸಿದ ಕೇವಲ 10ನಿಮಿಷದಲ್ಲಿ ಯು ಟರ್ನ್ ಹೊಡೆದ ಶಾಮಲ ನಾರಾಯಣಗೌಡ  ಬಿಜೆಪಿ ಪಾಳಯದಲ್ಲಿ ಕಾಣಿಸಿಕೊಂಡು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಳ್ಳುವುದಾಗಿ ಪ್ರಕಟಿಸುತ್ತಿದ್ದಂತೆ ಬಿಜೆಪಿಯಲ್ಲಿ ಸಂಭ್ರಮ ಮನೆಮಾಡಿತು. ಉಪಾಧ್ಯಕ್ಷೆ ಮತ್ತು ಬಿಜೆಪಿ ಮುಖಂಡರುಗಳು ಬಾಳೆಹೊನ್ನೂರಿನ ಬಿಜೆಪಿ ಕಾರ್ಯಾಲಯದಲ್ಲಿ ಜಮಾವಣೆಗೊಂಡರು. ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮಕ್ಕಿ ಉಮೇಶ್, ಕೆ.ಟಿ ವೆಂಕಟೇಶ್, ಬಿಜೆಪಿ ವಕ್ತಾರ ಜಗದೀಶ್ಚಂದ್ರ, ಬನ್ನೂರು ಬಿಜೆಪಿ ಮುಖಂಡ ಉರುಗುಡಿಗೆ ರಾಜು ವನಿತ, ಹಾಗೂ ಬನ್ನೂರು ಗ್ರಾಮಪಂಚಾಯ್ತಿ ಬಿಜೆಪಿ ಬೆಂಬಲಿತ ಸದಸ್ಯರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಈ ಸಂಧರ್ಭದಲ್ಲಿ ಮಾತನಾಡಿದ ಟಿ.ಎಂ.ಉಮೇಶ್ ಶಾಸಕರ ಅಭಿವೃದ್ಧಿ ಕಾರ್ಯ ಮೆಚ್ಚಿ ಪಕ್ಷಕ್ಕೆ ಆಗಮಿಸಿಸಿರುವ ಶಾಮಲ ನಾರಾಯಣ್ ಇನ್ನೂ ಹೆಚ್ಚಿನ ಜನಮೆಚ್ಚುವ ಕಾರ್ಯ ಮಾಡಲಿ , ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಸೇರಲಿದ್ದು ಕಾಂಗ್ರೇಸ್ ಒಡೆದ ಮನೆಯಂತಾಗಿರುವ ಸಂಕೇತವಿದು ಎಂದು ನುಡಿದರು.

Friday 2 March 2018

ಭದ್ರಾ ನದಿಯಲ್ಲಿ ಈಜಲು ಹೋಗಿ ಬಾಳೆಹೊನ್ನೂರಿನ ನಿತೇಶ್ ದುರ್ಮರಣ.

ಶೃಂಗೇರಿ ಬ್ಲಾಗ್:  ನದಿಯಲ್ಲಿ ಗೆಳೆಯರೊಂದಿಗೆ ಈಜಲು ಹೋಗಿ ಬಾಳೆಹೊನ್ನೂರಿನ ಮೆಣಸುಕೂಡಿಗೆಯ  ಸತೀಶ್ ಮತ್ತು ನಿರ್ಮಲ ಇವರ ಪುತ್ರ ನಿತೇಶ್ ದುರ್ಮರಣಕ್ಕೀಡಾಗಿದ್ದಾನೆ.  ಪ್ರಥಮ ಪಿಯುಸಿ ವಿಧ್ಯಾರ್ಥಿಯಾಗಿದ್ದು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕ ಗಳಿಸಿದ್ದ ಈತ ಪ್ರತಿಭಾವಂತ ವಿಧ್ಯಾರ್ಥಿಯಾಗಿದ್ದ. ನಿತೇಶ್ ನಿಧನಕ್ಕೆ ಶಾಸಕ ಜೀವರಾಜ್ , ತಾಲ್ಲೂಕ್ ಬಿಜೆಪಿ ಅಧ್ಯಕ್ಷ ವೆನಿಲ್ಲಾ ಭಾಸ್ಕರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಲ್ಮಕ್ಕಿ ಉಮೇಶ್, ಬಿಜೆಪಿ ಜಿಲ್ಲಾ ಮುಖಂಡ ಪ್ರಭಾಕರ್ ಪ್ರಣಸ್ವಿಬಜರಂಗದಳ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಆರ್.ಡಿ.ಮಹೇಂದ್ರ, ಬಿಜೆಪಿ ವಕ್ತಾರ ಜಗದೀಶ್ಚಂದ್ರ,  ಬಿಜೆಪಿ ಮಠ ಬ್ಲಾಕ್ ಮುಖಂಡ ಯೋಗೇಶ್ ಆಚಾರ್ ಶೋಕ ವ್ಯಕ್ತ ಪಡಿಸಿ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ಆ ಭಗವಂತ ನೀಡಲಿ ಎಂದು ಕೋರಿದ್ದಾರೆ.