Monday 19 March 2018

ಬಾಳೆಹೊನ್ನೂರು ಗಾಳಿಮಳೆಗೆ ಹಾನಿಗೊಳಗಾದ ಮನೆಗಳಿಗೆ ಜೀವರಾಜ್ ಬೇಟಿ.






ಶೃಂಗೇರಿ ಕ್ಷೇತ್ರ ನ್ಯೂಸ್.19.
ಬಾಳೆಹೊನ್ನೂರು ಹಾಗೂ ಸುತ್ತಮುತ್ತ ಕಳೆದ ಮೂರು ದಿನಗಳಿಂದ ಸುರಿದ ಗಾಳಿಮಳೆಗೆ ಅನೇಕ ಮನೆಗಳು ಹಾನಿಗೀಡಾಗಿದ್ದು ಶಾಸಕ ಜೀವರಾಜ್ ಹಾನಿಗೊಳಗಾದ ಮನೆಗಳಿಗೆ ಬೇಟಿ ನೀಡಿ ಸಂಬಂದ ಪಟ್ಟ ಇಲಾಖೆಯವರೊಂದಿಗೆ ಚರ್ಚಿಸಿದರು.
ಬಾಳೆಹೊನ್ನೂರಿನ ಹಿರಿಯ ಬಿಜೆಪಿ  ಕಾರ್ಯಕರ್ತ ಕೋಮಲ್ ಬೇಕರಿ ಮೋಹನ್ ರವರ ಮನೆ ತೆಂಗಿನ ಮರಬಿದ್ದು ಮನೆಯ ಮೊದಲನೆ ಮಹಡಿ ಸಂಪೂರ್ಣ ಜಖಂ ಗೊಂಡಿದ್ದನ್ನು ವೀಕ್ಷಿಸಿ ಮನೆಯವರೊಂದಿಗೆ ಚರ್ಚಿಸಿ ಇಲಾಖೆಗೆ ದಾಖಲೆಗಳನ್ನು ನೀಡುವಂತೆ ಸೂಚಿಸಿದರು. ನಂತರ ಅಯ್ಯಪ್ಪನಗರದ ಬೈರಪ್ಪನವರ ಮನೆಗೆ ಬೇಟಿ ಇತ್ತು ಹಾನಿಯ ಪ್ರಮಾಣವನ್ನು ವೀಕ್ಷಿಸಿದರು.
ಶಾಸಕರೊಂದಿಗೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಲ್ಮಕ್ಕಿ ಉಮೇಶ್, ಬಿಜೆಪಿ ಜಿಲ್ಲಾ ಮುಖಂಡ ಕೆ.ಟಿ.ವೆಂಕಟೇಶ್, ಬಿಜೆಪಿ ವಕ್ತಾರ ಜಗದೀಶ್ಚಂದ್ರ, ಬಿಜೆಪಿ ಮಾಜಿ ಹೋಬಳಿ ಅಧ್ಯಕ್ಷ ಧರ್ಮೇಗೌಡ, ಕಲ್ಮಕ್ಕಿ ಹರೀಶ್ ಇನ್ನಿತರ ಮುಖಂಡರುಹಾಜರಿದ್ದರು.

No comments:

Post a Comment