Wednesday 21 March 2018

ಮಾಗುಂಡಿಯಲ್ಲಿ ಬಾನುವಾರ  ಜೀವರಾಜ್ ರವರಿಂದ ವಿವಿದ ಕಾಮಗಾರಿಗೆ ಚಾಲನೆ ಮತ್ತು ಉದ್ಘಾಟನೆ.


ಇದೇ ಬರುವ 25-3-2018ರ ಬಾನುವಾರ ಮದ್ಯಾನ 3 ಗಂಟೆಗೆ ಸರಿಯಾಗಿ ಮಾಗುಂಡಿಯಲ್ಲಿ *ಹಿರೆಮಕ್ಕಿ ಕಾಲೋನಿಯಲ್ಲಿ ರೂ 25ಲಕ್ಷ ರೂಗಳ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಶಾಸಕ ಡಿ.ಎನ್ ಜೀವರಾಜ್ ರವರ ವಿಶೇಷ ನಿಧಿಯಲ್ಲಿ ನಿರ್ಮಿಸಲಾಗಿರುವ ನೂತನ ಆಟೋ ನಿಲ್ದಾಣದ ಉದ್ಘಾಟನೆ ತರುವಾಯ ಅಲ್ಪಸಂಖ್ಯಾತ ನಿಧಿಯಡಿ ರೂ 10ಲಕ್ಷ ರೂ ಗಳ ಕಾಂಕ್ರೀಟ್ ರಸ್ತೆಗೆ ಶಂಕುಸ್ಥಾಪನೆ ಯನ್ನು ಶಾಸಕ ಡಿ.ಎನ್ ಜೀವರಾಜ್ ನೆರವೇರಿಸಲಿದ್ದಾರೆಂದು ಬಿಜೆಪಿ ತಾಲ್ಲೂಕ್ ಅಧ್ಯಕ್ಷ ವೆನಿಲ್ಲಾ ಭಾಸ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರುಗಳು, ಸಾರ್ವಜನಿಕ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ ಬೇಕಾಗಿ ಕೋರಿದ್ದಾರೆ.

No comments:

Post a Comment