Saturday 17 March 2018

ರಂಭಾಪುರೀ ಜಗದ್ಗುರುಗಳ ದರ್ಶನಾಶೀರ್ವಾದಕ್ಕೆ ಅಮಿತ್ ಷಾ .

ವೀರಶೈವ ಲಿಂಗಾಯತ ಧರ್ಮದ ಪ್ರಥಮ ಪೀಠವಾದ ಶ್ರೀ ರಂಭಾಪುರೀ ಜಗದ್ಗುರುಗಳ ದರ್ಶನಾಶೀರ್ವಾದಕ್ಕೆ ಶೀಘ್ರದಲ್ಲೇ ಬಾಳೆಹೊನ್ನೂರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೇಟಿ ನೀಡಲಿದ್ದಾರೆಂದು ಶೀಘ್ರದಲ್ಲೇ ದಿನಾಂಕ ನಿರ್ಧಾರವಾಗಲಿದೆಯೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಲ್ಮಕ್ಕಿ ಉಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಮಿತ್ ಷಾ ರವರ ಕಾರ್ಯಕ್ರಮ ಶೃಂಗೇರಿ ಕ್ಷೇತ್ರಮಟ್ಟದಲ್ಲಿ ಕಾರ್ಯಕರ್ತರಲ್ಲಿ ಇನ್ನಷ್ಟು ಚೈತನ್ಯ ತುಂಬಲಿದ್ದು ಅಮಿತ್ ಷಾ ರವರ ಸ್ವಾಗತಕ್ಕೆ ಬಾಳೆಹೊನ್ನೂರು ಬಿಜೆಪಿ ಘಟಕ ವಿಶೇಷವಾದ ತಯಾರಿ ಮಾಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

No comments:

Post a Comment