Sunday 18 June 2017

ಕಲ್ಮಕ್ಕಿ ಉಮೇಶ್ ಬಿ.ಜೆ.ಪಿ ಗೆ ಸೇರ್ಪಡೆ



ಬಾಳೆಹೊನ್ನೂರಿನ ವಿ.ಎಸ್.ಎಸ್.ಎನ್ ಅಧ್ಯಕ್ಷರು, ಗ್ರಾಮಪಂಚಾಯಿತಿ ಸದಸ್ಯರು, ವಿದ್ಯಾಗಣಪತಿ ಸೇವಾ ಸಮಿತಿಯ ಮಾಜಿ ಅದ್ಯಕ್ಷರು ಬಾಳೆಹೊನ್ನೂರಿನ  ಪ್ರಮುಖ ವಕ್ಕಲಿಗ ರಾಜಕೀಯ ಧುರೀಣರು ಆದಂತ ಕಲ್ಮಕ್ಕಿ ಉಮೇಶ್ ರವರು ಬಿ.ಜೆ.ಪಿ ರಾಜ್ಯಾಧ್ಯಕ್ಷ ಸನ್ಮಾನ್ಯ ಬಿ.ಎಸ್ ಯಡೆಯೂರಪ್ಪನವರ ಸಮ್ಮುಖದಲ್ಲಿ ಕಡೂರಿನಲ್ಲಿ ದಿನಾಂಕ 19.06.2017 ರಂದು ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆಂದು ಬಿ.ಜೆ.ಪಿ ತಾಲ್ಲೂಕ್ ಅದ್ಯಕ್ಷ  ವೆನಿಲ್ಲಾ ಭಾಸ್ಕರ್ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮರಳಿಗೂಡಿಗೆ.......

ಎಸ್ ಕಲ್ಮಕ್ಕಿ ಉಮೇಶ್ ಅವರೊಂದು ದೈತ್ಯಶಕ್ತಿ. ಯಾವುದಾದರೊಂದು ವಿಚಾರವನ್ನು ಕೈಗೆತ್ತಿಕೊಂಡರೆ ಅದನ್ನು ಸಂಪೂರ್ಣ ತೀರ್ಮಾನವಾಗುವವರೆಗೂ ಕೈಬಿಡದ ಅಪ್ರತಿಮ ಜನಸೇವಕ. ಈ ಹಿಂದೆ ಬಿಜೆಪಿಯಲ್ಲಿಯೇ ಇದ್ದು ಕಾರಣಾಂತರದಿಂದ ಕಾಂಗ್ರೇಸ್ ಗೆ ಸೇರ್ಪಡೆಗೊಂಡಿದ್ದ ಅವರು ಕಾಂಗ್ರೇಸ್ ನಲ್ಲಿಕೇವಲ ವೈಯುಕ್ತಿಕತೆ ತಾಂಡವವಾಡುತ್ತಿದ್ದು ಅಲ್ಲಿರುವ ಗುಂಪುಗಾರಿಕೆಗೆ ಬೇಸತ್ತು ಹಾಗೂ ಜೀವರಾಜ್ ರವರ ಜನಪರ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆಂದು ಪತ್ರಿಕೆಗೆ ತಿಳಿಸಿದ್ದಾರೆ.

ಶೃಂಗೇರಿ ಕಾಂಗ್ರೇಸ್ ಒಡೆದಮನೆಯಂತಾಗಿದೆ.


ಬ್ಲಾಗ್ ನೊಂದಿಗೆ ಮಾತನಾಡಿದ ಕಲ್ಮಕ್ಕಿ ಉಮೇಶ್ ಕಾಂಗ್ರೇಸ್ ಒಡೆದ ಮನೆಯಂತಾಗಿದ್ದು ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿರುವಂತೆ ಕಂಡುಬಂದರೂ ಒಳಗಡೆ ಯಾವುದು ಸರಿ ಇಲ್ಲ ನಾಯಕರುಗಳಲ್ಲಿ ಒಗ್ಗಟ್ಟು ಇಲ್ಲದೇ ಅಲ್ಲಿರುವ ಕಾಂಗ್ರೇಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮುಂದಿನದಿನಗಳಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದು ಮುಂದಿನ ದಿನಗಳಲ್ಲಿ ವಲಸೆ ಪರ್ವ ಆರಂಭವಾಗಲಿದ್ದು ಜೀವರಾಜ್ ರವರ ನಾಲ್ಕನೆ ಗೆಲುವು ಶತಸಿದ್ಧ,  ಜೀವರಾಜ್ ಮುಂದಿನ ಚುನಾವಣೆಯಲ್ಲಿ 20ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವುಸಾಧಿಸಲಿದ್ದಾರೆ ಎಂದು ಭವಿಷ್ಯನುಡಿದರು.

ಜೆ.ಡಿ.ಎಸ್ ಅನ್ನು ಯಾರು ನಂಬೊಲ್ಲ..


ಜೆಡಿಎಸ್ ಮಾಜಿ ಮಂತ್ರಿ ಗೋವಿಂದೇಗೌಡರ ಪುತ್ರ ವೆಂಕಟೇಶ್ ರವರನ್ನು ಕಣಕ್ಕಿಳಿಸಿದರು ಆ ಪಕ್ಷವನ್ನು ಯಾರು ನಂಬುವ ಸ್ಥಿತಿಯಲ್ಲಿ ಇಲ್ಲ..  ಗೋವಿಂದೇ ಗೌಡರಂತ ನಾಯಕರ ರಾಜಕೀಯ ಇಚ್ಛಾಶಕ್ತಿಯನ್ನು ಜನತೆ ಈಗ ಡಿ.ಎನ್.ಜೀವರಾಜ್ ರವರಲ್ಲಿ ಕಾಣುತ್ತಿದ್ದು   ಜೀವರಾಜ್ ನೇತೃತ್ವದಲ್ಲೇ ಜನತೆ ಈ ಕ್ಷೇತ್ರದ ಅಭಿವೃದ್ಧಿಯನ್ನು ಕಾಣುತ್ತಿದ್ದು ಅದನ್ನು ಮುಂದಿನ ಚುನಾವಣೆಯಲ್ಲಿ ಅಪಾರ ಸಂಖ್ಯೆಯಲ್ಲಿ ಬೆಂಬಲಿಸಿ ಅದನ್ನು ಸಾಭೀತು ಪಡಸಲಿದ್ದಾರೆ ಎಂದು ನುಡಿದರು.

No comments:

Post a Comment