Wednesday 21 June 2017

50 ಸಾವಿರ ಸಾಲಮನ್ನ.. ಯಡೆಯೂರಪ್ಪನವರ ಹೋರಾಟಕ್ಕೆ ಸಂದ ಜಯ -   ವೆನಿಲ್ಲಾ ಭಾಸ್ಕರ್..



ರಾಜ್ಯದ  ರೈತ ನಾಯಕ ಬಿ.ಎಸ್ ಯಡೆಯೂರಪ್ಪನವರ ರಾಜ್ಯ ಬರಪರಿಹಾರ ಪ್ರವಾಸ ಹಾಗೂ ಮೊನ್ನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನಲ್ಲಿ  ರಾಜ್ಯ ಸರ್ಕಾರದ ವಿರುದ್ದ ಗುಡುಗಿ ರೈತರ ನೆರವಿಗೆ ರಾಜ್ಯ ಸರ್ಕಾರ ಬಾರದಿದ್ದಲ್ಲಿ ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗುವುದೆಂಬ ಎಚ್ಚರಿಕೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ 50 ಸಾವಿರ ಸಾಲಮನ್ನಾ ಮಾಡಿದ್ದು ಈ ಮೊತ್ತವನ್ನು ಕನಿಷ್ಟ 2 ಲಕ್ಷಕ್ಕೆ ಏರಿಕೆ ಮಾಡಬೇಕೆಂದು ನರಾಪುರ  ಬಿಜೆಪಿ ತಾಲ್ಲೂಕು ಅಧ್ಯಕ್ಷ ವೆನಿಲ್ಲಾ ಭಾಸ್ಕರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬ್ಲಾಗ್ ಮಾತನಾಡುತ್ತ ಕೇವಲ ಸಹಕಾರಿ ಸಾಲಮಾತ್ರವಲ್ಲದೇ ರಾಷ್ಟ್ರೀಕೃತ ಬ್ಯಾಂಕಿನ ಸಂಪೂರ್ಣ ಸಾಲಮನ್ನ ವನ್ನು ಸರ್ಕಾರ ಮಾಡಿದರೆ ರೈತರ ಆತ್ಮಹತ್ಯೆ ತಡೆಗಟ್ಟಿ ರೈತರ ರಕ್ಷಣೆ ಮಾಡಬಹುದೆಂದು ಅಭಿಪ್ರಾಯ ಪಟ್ಟಿದ್ದಾರೆ.

No comments:

Post a Comment