Friday 23 June 2017

ಅಣ್ಣತಮ್ಮಂದಿರಂತೆ ಬದುಕೋಣ - ಕಲ್ಮಕ್ಕಿ ಉಮೇಶ್.




ಭಾಳೆಹೊನ್ನೂರಿನಲ್ಲಿ ಸರ್ವರೂ ಅಣ್ಣತಮ್ಮಂದಿರಂತೆ ಬದುಕೋಣ , ಆಯಾ ಸಮಾಜದ ಮುಖಂಡರುಗಳು ದಾರಿತಪ್ಪುತ್ತಿರುವ ಯುವಕರನ್ನು ಸರಿದಾರಿಗೆ ತರುತ್ತಿರುವುದರಿಂದ ಬಾಳೆಹೊನ್ನೂರಿನಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವಂತಾಗಿದೆ ಎಂದು ವಿಎಸ್ ಎಸ್ ಎನ್ ಅಧ್ಯಕ್ಷರು, ಬಿಜೆಪಿ ಮುಖಂಡರು ಆದ ಕಲ್ಮಕ್ಕಿ ಉಮೇಶ್ ನುಡಿದರು. ಅವರು ಬಾಳೆಹೊನ್ನೂರಿನ ಪೋಲೀಸ್ ಠಾಣೆಯಲ್ಲಿ ರಂಜಾನ್ ಹಬ್ಬದ ನಿಮಿತ್ತ ಕರೆದ ಶಾಂತಿ ಸಭೆಯಲ್ಲಿ ಮಾತನಾಡುತ್ತಿದ್ದರು.  ಸಭೆಯಲ್ಲಿ ನರಾ ಪುರ ಸರ್ಕಲ್ ಇನ್ಸ್ಪೆಕ್ಟರ್, ಬಾಳೆಹೊನ್ನೂರು ಠಾಣಾಧಿಕಾರಿ ರಾಜಶೇಖರ್, ಪಂಚಾಯಿತಿ ಅಧ್ಯಕ್ಷರಾದ ಜುಹೇಬ್,  ಬಿಜೆಪಿ ಜಿಲ್ಲಾ ರೈತಮೋರ್ಚಾ  ಮುಖಂಡರಾದ ಕೆ.ಟಿ.ವೆಂಕಟೇಶ್,  ವಿಶ್ವ ಹಿಂದೂ ಬಜರಂಗದಳ ಜಿಲ್ಲಾ ಉಪಾಧ್ಯಕ್ಷ ಆರ್.ಡಿ.ಮಹೇಂದ್ರ. ಭಿಜೆಪಿಯ ಮುಖಂಡರಾದ ಪ್ರಭಾಕರ್ ಪ್ರಣಸ್ವಿ, ಜಗದೀಶ್ಚಂದ್ರ, ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಯು.ಅಶ್ರಪ್, ತಾಲ್ಲೂಕ್ ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷ ಇಬ್ರಾಹಿಂ ಶಾಪಿ,  ಗ್ರಾಮ ಪಂಚಾಯಿತ್ ಸದಸ್ಯರಾದ ಮಹೇಶ್ ಶೆಟ್ಟಿ,  ಉಪಸ್ಥಿತರಿದ್ದರು

No comments:

Post a Comment