Thursday 15 June 2017

ಅಡಕೆಗೆ  ಬೆಂಬಲ ಬೆಲೆ ಮತ್ತು ಅಮದುಸುಂಕ ಏರಿಕೆಯಾಗಬೇಕೆಂದು ಜೀವರಾಜ್ ಹಟಹಿಡಿದು ಕೆಲಸ ಮಾಡಿಸಿಕೊಂಡರು- ಕೇಂದ್ರಸಚಿವೆ ನಿರ್ಮಲ ಸೀತಾರಾಮನ್


ಕೇಂದ್ರವಾಣಿಜ್ಯ ಸಚಿವೆ ನಿರ್ಮಲಸೀತಾರಾಮನ್ ರವರು ಬಾಳೆಹೊನ್ನೂರಿನ ಬಿ.ಜೆ.ಪಿ ಕಾರ್ಯಾಲಯಕ್ಕೆ ಆಗಮಿಸಿದಾಗ ಬ್ಲಾಗ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಈ ರೀತಿ ನುಡಿದರು.  ಇಂದು ಅಡಕೆ ಬೆಳೆಗಾರರು, ರಬ್ಬರ್ ಬೆಳೆಗಾರರ ಸಂಘದಿಂದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು ಶಾಸಕ ಜೀವರಾಜ್  ಆಡಕೆಗೆ ಬೆಂಬಲ ಬೆಲೆ ಮತ್ತು ಅಮದು ಸುಂಕ ಏರಿಕೆಯಾಗಬೇಕೆಂದು ನನ್ನೊಂದಿಗೆ ಹಟಮಾಡಿ ಕೆಲಸಮಾಡಿಸಿಕೊಂಡರು. ಇಂದು ಮಾರುಕಟ್ಟೆಯಲ್ಲಿ ಅಡಕೆ ಬೆಲೆ ಏನಾದರೂ ಏರಿಕೆ ಕಾಣುತ್ತಿದೆ ಎಂದರೆ ಅದರಲ್ಲಿ ಜೀವರಾಜ್ ಹಾಗೂ ಸಂಸದೆ ಶೋಭಾಕರಂದ್ಲಾಜೆಯವರ ಶ್ರಮ ಬಹಳಷ್ಟಿದ್ದು ಇದರ ಎಲ್ಲಾ ಶ್ರೇಯಸ್ಸು ಅವರಿಗೆ ಸೇರಬೇಕೆಂದು ನುಡಿದರು.

ಇದೇ ಸಂದರ್ಭದಲ್ಲಿ ಮ್ಯಾಂಮ್ಕೋಸ್ ಉಪಾಧ್ಯಕ್ಷರಾದ ಸುಬ್ರಮಣ್ಯ ಯಡಗೆರೆ ನೇತೃತ್ವದಲ್ಲಿ, ರಬ್ಬರ್ ಬೆಳೆಗಾರರ ಸಂಘದ ಉಪಾಧ್ಯಕ್ಷ ಟಿ. ವಿ. ವಿಜಯನ್ ನೇತೃತ್ವದಲ್ಲಿ ಬೆಳೆಗಾರರ ಪರವಾಗಿ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಶಾಸಕ ಡಿ.ಎನ್ ಜೀವರಾಜ್, ಸಂಸದೆ ಶೋಭಾಕರಂದ್ಲಾಜೆ, ತಾಲ್ಲೂಕ್ ಬಿಜೆಪಿ ಅಧ್ಯಕ್ಷ ವೆನಿಲ್ಲಾ ಭಾಸ್ಕರ್,  ಬಿಜೆಪಿ ಮುಖಂಡ ಉಮೇಶ್ ಕಲ್ಮಕ್ಕಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಸ್ವಾಮಿ, ತಾಲ್ಲೂಕ್ ಪಂಚಾಯಿತಿ ಉಪಾಧ್ಯಕ್ಷ ಮಂಜು ಹೊಳೆಬಾಗಿಲು,  ಬಿಜೆಪಿ ಜಿಲ್ಲಾ ಮುಖಂಡರಾದ ಕೆ.ಟಿ.ವೆಂಕಟೇಶ್, ಹೋಬಳಿ ಅದ್ಯಕ್ಷ ಕೆ.ಕೆ.ವೆಂಕಟೇಶ್, ಅಲ್ಪಸಂಖ್ಯಾತ ಮೋರ್ಚಾದ ಪಿ.ಜೆ ಆಂಟೋನಿ, ಇಬ್ರಾಹಿಂ ಶಾಪಿ, ಯು.ಅಶ್ರಪ್,

ಆರ್.ಡಿ.ಮಹೇಂದ್ರ,  ಪ್ರಭಾಕರ್ ಪ್ರಣಸ್ವಿ, ಜಗದೀಶ್ಚಂದ್ರ.ಬಿ. ಕೊಪ್ಪ ತಾಲ್ಲೂಕ್ ಪಂಚಾಯಿತಿ ಅದ್ಯಕ್ಷ ಉದಯ್  ಹುಯಿಗೆರೆ ಹೋಬಳಿ ಅದ್ಯಕ್ಷ ರವಿ  ಕೊಪ್ಪ ತಾಲ್ಲೂಕ್ ಅಧ್ಯಕ್ಷ ಮಹಭಲರಾವ್,  ಯುವಮೋರ್ಚಾ ಜಿಲ್ಲಾಧ್ಯಕ್ಷ ಪುಣ್ಯಪಾಲ್, ನಿಖಿಲ್ ಉಮೇಶ್ ಹೊಸಮನೆ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.





1 comment:

  1. Great thanks to our Jeevaraj.shobakka and Nirmala seetharam
    an.

    ReplyDelete