Monday 19 June 2017

ಭಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ವೈ ಸಮ್ಮುಖದಲ್ಲಿ  ಕಲ್ಮಕ್ಕಿ ಉಮೇಶ್ ಬಿಜೆಪಿಗೆ ಸೇರ್ಪಡೆ...


ದಿನಾಂಕ 19.6.2017 ರಂದು ಕಡೂರಿನಲ್ಲಿ ನೆಡೆದ ಪ್ರಮುಖ ಕಾರ್ಯಕರ್ತರ ಜಿಲ್ಲಾ ಸಮಾವೇಶದಲ್ಲಿ ಬಾಳೆಹೊನ್ನೂರಿನ ಪ್ರಮುಖ ಒಕ್ಕಲಿಗ ಮುಖಂಡ , ವಿಎಸ್ ಎಸ್ ಎನ್ ಅಧ್ಯಕ್ಷ ಕಲ್ಮಕ್ಕಿ ಉಮೇಶ್ ರವರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು. ಈ ಸಂಧರ್ಭದಲ್ಲಿ ದಲಿತ ಸಂಘರ್ಷಸಮಿತಿಯ ಜಿಲ್ಲಾ ಮುಖಂಡರಾದ ಕೆ.ಕೆ.ಬಾಬು, ಹಾಗೂ ಬಾಳೆಹೊನ್ನೂರಿನ ಇನ್ನೋರ್ವ ಕಾಂಗ್ರೇಸ್ ಮುಖಂಡ ಬಿ.ಜಿ ನಾರಾಯಣ್ ಬನ್ನೂರು ಇವರು ಸಹಸ್ರಾರು ಕಾರ್ಯಕರ್ತರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂಧರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಶಾಸಕರು ಆದಂತ ಶ್ರೀ ಡಿ.ಎನ್.ಜೀವರಾಜ್ ಸಂಸದೆ ಶೋಭಾಕರಂದ್ಲಾಜೆ,  ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್  ಹಾಗೂ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.

No comments:

Post a Comment