Sunday 18 February 2018

ಮಾಜಿ ಮಂತ್ರಿ ಜೀವರಾಜ್ ಟ್ರಾಪಿಕ್ ಪೋಲಿಸ್ ಆದ ಕತೆ.

ಲೇಖಕರು: ಜಗದೀಶ್ಚಂದ್ರ.ಬಿ


ಶೃಂಗೇರಿ ಕ್ಷೇತ್ರದಲ್ಲಿ ಒಂದು ಸಲ ಶಾಸಕನಾದರೇ ಸಾಕು ಎಂದು ಹಲುಬುತ್ತಿರುವ ಕೆಲ ಪ್ರೇತಾತ್ಮಗಳ ನಡುವೆ ನಮ್ಮ ಹ್ಯಾಟ್ರಿಕ್ ಹೀರೋ.. ಮಾಜಿ ಮಂತ್ರಿ ಬಡಜನರ ಕಣ್ಮಣಿ ವಿಭಿನ್ನವಾಗಿ ಜನರಿಗೆ ಇಷ್ಟವಾಗುವುದೇ ಅವರ ಸರಳತೆಯ ಕಾರಣಕ್ಕೆ..
ದಿನಾಂಕ 18.2.2018 ರಂದು ಮಾನ್ಯ ಶಾಸಕ ಜೀವರಾಜ್ ಶೃಂಗೇರಿಯಿಂದ ಬಾಳೆಹೊನ್ನೂರಿಗೆ ಬರುತ್ತಿದ್ದರುಈ ಸಮಯದಲ್ಲಿ ಚಿಕ್ಕಬಳ್ಳಾಪುರ ಕಡೆಯ ಕಾಂಗ್ರೇಸ್ ಶಾಸಕನೋರ್ವ ತನಗೆ ಚುನಾವಣೆಯಲ್ಲಿ ಲಾಭವಾಗಲಿ ಎಂದು ತನ್ನ ಕ್ಷೇತ್ರದ. ಕೆಲವರನ್ನು 40ಬಸ್ ಗಳಲ್ಲಿ ಶೃಂಗೇರಿ ಪ್ರವಾಸಕ್ಕೆ ಕಳುಹಿಸಿದ್ದಾರೆ. ಇನ್ನೂ ಹೇಳಿ ಕೇಳಿ ಶಾಸಕರು ಕಳುಹಿಸಿದ್ದು ಸರ್ಕಾರವೂ ಕಾಂಗ್ರೇಸ್ ದೇ ಎಂಬ ಅಹಂ ನಲ್ಲಿ ಆ ಬಸ್ ಚಾಲಕರು ಶೃಂಗೇರಿಯಿಂದಲೇ ಅತಿವೇಗಗಾಗಿ ನುಗ್ಗುತ್ತಾ ಬಂದಿದ್ದಾರೆ ಈಗೆ ಬರುವಾಗ ಬಸರಿ ಕಟ್ಟೆ ಹ್ಯಾಂಡ್ ಪೋಸ್ಟ್ ಬಳಿ ಸ್ಥಳಿಯ ಖಾಸಗಿ ವಾಹನಕ್ಕೆ ತಾಗಿಸಿದ್ದಾರೆ ಆಗ ಸ್ಥಳಿಯರೊಂದಿಗೆ ಆ ಕಾಂಗ್ರೇಸ್  ಶಾಸಕರ ಗೂಂಡಾ ಬೆಂಬಲಿಗರು ಖ್ಯಾತೆ ತೆಗೆದಿದ್ದಾರೆ. ಏಕಾ ಏಕಿ 40ಬಸ್ ಗಳು ಒಂದರ ಹಿಂದೆ ಒಂದರಂತೆ ರಸ್ತೆಗೆ ಸಾಲು ಸಾಲಾಗಿ ಅಡ್ಡಗಟ್ಟಿ ನಿಂತಾಗ ಟ್ರಾಪಿಕ್ ಜಾಮ್ ಆದಾಗ ಅದೇ ದಾರಿಯಲ್ಲಿ ಬರುತ್ತಿದ್ದ ನಮ್ಮ ಜನನಾಯಕ ಜೀವರಾಜ್ ಸ್ಥಳಿಯರೊಂದಿಗೆ ವಿಚಾರ ತಿಳಿದು ತಾವೇ ಖುದ್ದಾಗಿ ಹೋಗಿ ಜಗಳಬಗೆಹರಿಸಿ  ಗೂಂಡಾವರ್ತನೆ ತೋರಿದ ಕಾಂಗ್ರೇಸ್ ಶಾಸಕರ ಹಿಂಬಾಲಕರಿಗೆ ತಮ್ಮ ಮಾತಿನ ವರಸೆಯಿಂದಲೇ ನಯವಾದ ಚಾಟೀ ಬೀಸಿ ಸಂಪೂರ್ಣ ರಸ್ತೆಯ ಟ್ರಾಪಿಕ್ ಸರಿಯಾಗುವವರೆಗೂ ತಾವೇ ನಿಂತು ಸರಿಮಾಡಿ ಮತ್ತೆ ತಮ್ಮ ಕಾರ್ ಏರಿ ಬಾಳೆಹೊನ್ನೂರಿನ ಕಡೆ ಹೊರಟಿದ್ದಾರೆ. ಓರ್ವ ಶಾಸಕನಾಗಿ ಮಾಜಿ ಮಂತ್ರಿಯಾಗಿ ಜೀವರಾಜ್ ನೆಡೆನುಡಿಕಂಡ ಕಾಂಗ್ರೇಸ್ ಶಾಸಕರ ಬೆಂಬಲಿಗರು ಜೀವರಾಜ್ ರವರನ್ನು ಗುಣಗಾನ ಮಾಡಿದರೆ. ಇದನ್ನೆಲ್ಲ ವೀಕ್ಷಿಸುತ್ತಿದ್ದ ಸ್ಥಳಿಯರು ಶಾಸಕರ ಜನಪರ ಜವಾಬ್ದಾರಿಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಏನೇ ಇರಲಿ ಒಬ್ಬ ಜನನಾಯಕ ಹೇಗಿರಬೇಕೆಂಬುದಕ್ಕೆ ಜೀವರಾಜ್ ಮಾದರಿ ಎಂದರೆ ತಪ್ಪಾಗಲಾರದು.

No comments:

Post a Comment