Sunday 18 February 2018

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಕಲ್ಮಕ್ಕಿ ಉಮೇಶ್

ಚುನಾವಣೆಗೆ ಎರೆಡೂ ವರ್ಷದಿಂದ ಭರ್ಜರಿ ತಯಾರಿ ನೆಡೆಸಿರುವ ಬಿಜೆಪಿ ಈಗ ಬಾಳೆಹೊನ್ನೂರು ಹೋಬಳಿಯಲ್ಲಿ ಪ್ರಭಲ ವಕ್ಕಲಿಗ ನಾಯಕರಾಗಿದ್ದ ಕಲ್ಮಕ್ಕಿ ಉಮೇಶ್ ರವರನ್ನು ಕಳೆದ 6 ತಿಂಗಳ ಹಿಂದೆಯೇ ಕಾಂಗ್ರೇಸ್ ನಿಂದ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ವಿಎಸ್ ಎಸ್ ಎನ್ ಅಧ್ಯಕ್ಷರಾಗಿ ಪ್ರಭಲ ವಕ್ಕಲಿಗ ಮುಖಂಡರಾಗಿರುವ ಕಲ್ಮಕ್ಕಿ ಉಮೇಶ್ ರವರ ಸೇವೆಯನ್ನು ಇನ್ನಷ್ಟು ಬಳಸುವ ಉದ್ದೇಶದಿಂದ ಬಿಜೆಪಿ ಜಿಲ್ಲಾಧ್ಯಕ್ಷರು ಶಾಸಕರು ಆಗಿರುವ ಡಿ.ಎನ್.ಜೀವರಾಜ್ ರವರು ಕಲ್ಮಕ್ಕಿ ಉಮೇಶ್ ರವರನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ಈ ಸುದ್ದಿಯನ್ನು ಶೃಂಗೇರಿ ಬ್ಲಾಗ್ ಗೆ ತಿಳಿಸಿರುವ ನ.ರಾ.ಪುರ ತಾಲ್ಲೂಕ್ ಅಧ್ಯಕ್ಷ ಶ್ರೀ ವೆನಿಲ್ಲಾ ಭಾಸ್ಕರ್ ಕಲ್ಮಕ್ಕಿ ಉಮೇಶ್ ರವರಿಗೆ ಜಿಲ್ಲಾ ಉಪಾಧ್ಯಕ್ಷ ರನ್ನಾಗಿ ನೇಮಕ ಮಾಡಿರುವುದು ನಿಜಕ್ಕೂ ಸಂತಸದ ವಿಚಾರವಾಗಿದ್ದು  ಮುಂದಿನ ದಿನಗಳಲ್ಲಿ ಇದು ಪಕ್ಷದ ಬೆಳವಣಿಗೆಗೆ ಪೂರಕವಾಗಿದ್ದು ಇದೇ ಪ್ರಪ್ರಥಮ ಬಾರಿಗೆ ಬಾಳೆಹೊನ್ನೂರು ಹೋಬಳಿ ವಿಧಾನಸಭಾ ಚುನಾವಣೆಯಲ್ಲಿ ಲೀಡ್ ನೀಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು ಈ ಸುದ್ದಿ ಕಾರ್ಯಕರ್ತರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ ಎಂದು ನುಡಿದರು.

No comments:

Post a Comment