Wednesday 30 August 2017

ಕಾಂಗ್ರೇಸ್ ತೊರೆದು ಬಿಜೆಪಿಗೆ ಸೇರ್ಪಡೆ.

ಕೊಪ್ಪ ತಾಲ್ಲೂಕಿನ ಮೇಗುಂದ ಹೋಬಳಿಯ ಸರಿಸುಮಾರು 13 ಜನ ಕಾಂಗ್ರೇಸ್ ಮುಖಂಡರು ಸ್ಥಳಿಯ ಕಾಂಗ್ರೆಸ್ ಮುಖಂಡರ ಜಾತಿ ರಾಜಕೀಯ. ಅಭಿವೃದ್ಧಿ ಕಾರ್ಯಗಳಲ್ಲಿ ಅಡ್ಡಗಾಲು ಹಾಕುವುದು,  ಸ್ಥಳಿಯ ಕೆಳ ವರ್ಗದ ಜನರನ್ನು  ನೇಪಥ್ಯಕ್ಕೆ ಮಾತ್ರ ಬಳಸಿಕೊಳ್ಳುವುದನ್ನು ವಿರೋದಿಸಿ ಮಾನ್ಯ ಶಾಸಕರಾದ ಡಿ.ಎನ್.ಜೀವರಾಜ್ ರವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮುಂದೆಯೂ ಅವರೇ ಶಾಸಕರಾಗಿ ಮಂತ್ರಿಗಳು ಆಗಲಿ ಎಂಬ ಅಭಿಲಾಷೆಯಿಂದ ಅವರ ಕೈ ಬಲಪಡಿಸಲು ಬಿಜೆಪಿ ಪಕ್ಷಕ್ಕೆ ಕೊಪ್ಪದ ಕ್ಷೇತ್ರ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಡಿ.ಎನ್.ಜೀವರಾಜ್ ಸಮ್ಮುಖದಲ್ಲಿ  ಸೇರ್ಪಡೆಯಾದರು.
ಈ ಸಂಧರ್ಭದಲ್ಲಿ ಬ್ಲಾಗ್ ನೊಂದಿಗೆ ಮಾತನಾಡಿದ ಜೀವರಾಜ್ ಕ್ಷೇತ್ರದಲ್ಲಿ ಹೊಸ ಮನ್ವಂತರದ ಗಾಳಿ ಬೀಸುತ್ತಿದ್ದು ನನಗೆ ನನ್ನ ಮೊದಲ ಗೆಲುವಿನ ಚುನಾವಣೆಯ ಕೆಲ ನೆನಪುಗಳು ಮರುಕಳಿಸುತ್ತಲಿದೆ. ಕ್ಷೇತ್ರದ ಮತದಾರರು ಈ ಹಿಂದಿಗಿಂತಲೂ ಪ್ರಭುದ್ಧರಾಗಿದ್ದು ಅವರು ದಿನ ನಿತ್ಯದ ಚಟುವಟಿಕೆಗಳನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾನೆ.
ಕಾಂಗ್ರೇಸ್ ಒಡೆದ ಮನೆಯಂತಾಗಿದ್ದು ಅದು ಎಲ್ಲಿಯವರೆಗೂ ಅವರ ಕಾರ್ಯಕರ್ತರನ್ನು ಜೀತದವರಂತೆ ನೆಡೆಸಿಕೊಂಡು ಬರುತ್ತದೆಯೋ ಅಲ್ಲಿಯವರೆಗೂ ಆ ಪಕ್ಷಕ್ಕೆ ಶೃಂಗೇರಿಯಲ್ಲಿ ನೆಲೆ ಇಲ್ಲ ಅಲ್ಲದೇ ಈಗಾಗಲೇ ಕ್ಷೇತ್ರದ ಜನತೆ ಒಂದು ಚುನಾವಣೆಯಲ್ಲಿ ಗೆಲ್ಲದೇ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ ಇನ್ನೂ ಗೆದ್ದರೆ ಇನ್ನೆಷ್ಟು ಸುಳ್ಳು ಹೇಳಬಹುದು ಎಂದು ಆಲೋಚಿಸುತ್ತಿದ್ದಾರೆ ಹಾಗಾಗಿ ಕಾಂಗ್ರೇಸ್ ನ ದುಡ್ಡಿನ ಮದ ಈ ಬಾರಿ ಕರಗೇ ಕರಗುತ್ತದೆ ಎಂದು ನುಡಿದರು.
ನಿಮಗೆ ಬಿಜೆಪಿ ಟಿಕೇಟ್ ಸಿಗುವುದಿಲ್ಲವಂತೆ ಎಂದು ಕಾಂಗ್ರೇಸ್ ನವರು ಅಪಪ್ರಚಾರ ಮಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಜೀವರಾಜ್ ನಾನು ಜನರ ನನ್ನ ಕಾರ್ಯಕರ್ತರ ನನ್ನ ಪಕ್ಷದ  ನಿಷ್ಠಾವಂತ  ಬಿಜೆಪಿ ಕಾರ್ಯಕರ್ತ ನನ್ನ ಪಕ್ಷ ನನ್ನ ಜನರು ಏನು ಹೇಳುತ್ತಾರೋ ಅದನ್ನು ಮಾಡಲು ನಾನು ಸಿದ್ಧ.. ಅದು ಬಿಟ್ಟು ಕಾಂಗ್ರೇಸ್ ಪುಡಾರಿಗಳ ಮಾತುಗಳು ಅವರ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ  ಸೋಲಿನ ಭಯ ಕಾಂಗ್ರೇಸನ್ನು ಆವರಿಸಿದೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ನರಾಪುರ ಮಂಡಲ ಅಧ್ಯಕ್ಷ ವೆನಿಲ್ಲಾ ಭಾಸ್ಕರ್. ಕೊಪ್ಪ ಮಂಡಲ ಅಧ್ಯಕ್ಷ ಮಹಬಲರಾವ್.. ಶೃಂಗೇರಿ ಮಂಡಲ ಅಧ್ಯಕ್ಷ ನಟೇಶ್ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಸ್ವಾಮಿ.  ಕ್ಷೇತ್ರ ಸಂಘಟನ ಕಾರ್ಯದರ್ಶಿ ಗಣೇಶ್ ರಾವ್ ಉಪಸ್ಥಿತರಿದ್ದರು.

No comments:

Post a Comment