Wednesday 30 August 2017

ಸೆಪ್ಟಂಬರ್ 3 ಕ್ಕೆ ಶ್ರೀ ಆನಂದಗುರೂಜಿ ಬಾಳೆಹೊನ್ನೂರಿಗೆ



ದಿನಾಂಕ 3-9-2017 ರಂದು ಬಾಳೆಹೊನ್ನೂರಿನ ವಿಧ್ಯಾಗಣಪತಿ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮಹರ್ಶಿ  ಶ್ರೀ ಆನಂದ ಗುರೂಜಿಯವರನ್ನು ಬಾಳೆಹೊನ್ನೂರು ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ವತಿಯಿಂದ ಅಧ್ಯಕ್ಷರಾದ ಶ್ರೀ ಕಲ್ಮಕ್ಕಿ ನಾಗೇಶ್ ರವರು ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು. ಈ ಸಂಧರ್ಭದಲ್ಲಿ ಸಮಿತಿಯ ಮುಖಂಡರು ಆದ ಕಲ್ಮಕ್ಕಿ ಉಮೇಶ್ ಮತ್ತು ಬಾಬಣ್ಣ ಮತ್ತು ಟಿ.ಎಂ.ಯೋಗೇಶ್ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಬ್ಲಾಗ್ ನೊಂದಿಗೆ ಮಾತನಾಡಿದ ಟಿ.ಎಂ. ನಾಗೇಶ್ ಆ ದಿನ ಸಂಜೆ ನಾಲ್ಕು ಗಂಟೆಗೆ ಮಹರ್ಷಿಯವರ ದಿವ್ಯ ಸಾನಿಧ್ಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪೂಜಾ ಕಾರ್ಯದಲ್ಲಿ ಭಾಗವಹಿಸಲು ಇಚ್ಛಿಸುವವರು ರೂ 1000  ನೀಡಿ ತಮ್ಮ ಹೆಸರನ್ನು ನೊಡಾಯಿಸಲು ಸಮಿತಿ ಆಯೋಜಿಸಿದ್ದು ಪೂಜಾ ಕಾರ್ಯದ ಟಿಕೇಟ್ ಗಳು ಸಮಿತಿಯ ಕೌಂಟರ್ ನಲ್ಲಿ ದೊರೆಯುತಿದ್ದು ಇದರ ಸದುಪಯೋಗವನ್ನು ಭಕ್ತಾಭಿಮಾನಿಗಳು ಪಡೆಯಬಹುದಾಗಿದೆ ಎಂದು ತಿಳಿಸಿದರು. ಅಲ್ಲದೇ ದಿನಾಂಕ 4-9-2017  ರಂದು ಬೃಹತ್ ಅನ್ನಧಾನ ಕಾರ್ಯಕ್ರಮ ಆಯೋಜಿಸಿದ್ದು ಅನ್ನಧಾನದ ನಂತರ ಶ್ರೀ ಮಹಾಗಣಪತಿಯ ವಿಸರ್ಜನಾ ಮೆರವಣಿಗೆ ಆಕರ್ಷಕ ಕಲಾತಂಡಗಳ ನೇತೃತ್ವದಲ್ಲಿ ನೆಡೆಯಲಿದ್ದು ಅದೇ ದಿನ ಜೆ.ಸಿ.ಸರ್ಕಲ್ ನಲ್ಲಿ ಆಕರ್ಷಕ ಸಿಡಿಮದ್ದಿನ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಟಿ.ಎಂ.ನಾಗೇಶ್ ತಿಳಿಸಿದರು.

No comments:

Post a Comment