Friday 9 February 2018

ಸಮೀಕ್ಷೆ ಬಹಿರಂಗ : ಅಭ್ಯರ್ಥಿ ಬದಲಾವಣೆಗೆ ಕಾಂಗ್ರೇಸ್ ನಲ್ಲಿ ಗರಿಗೆದರಿದ ರಾಜಕೀಯ.

ಚುನಾವಣಾ ಸಮಯ ಚುನಾವಣೋತ್ತರ ಸಮೀಕ್ಷೆಗಳದ್ದೇ ಚರ್ಚೆ . ದಿನಕ್ಕೊಂದು ಚಾನಲ್ ಪತ್ರಿಕೆ ಸಮೀಕ್ಷೆ ಹೊರಬೀಳುತ್ತಿದ್ದಂತೆ ಶೃಂಗೇರಿ ಕ್ಷೇತ್ರದ ಚಿತ್ರಣವೇ ಬದಲಾಗುತ್ತಿದೆ. ಹೌದು ಎಲ್ಲಾ ಚುನಾವಣ ಸಮೀಕ್ಷೆಗಳು ಬಿಜೆಪಿ ಯ ಡಿ.ಎನ್.ಜೀವರಾಜ್ ಗೆಲುವು ಖಚಿತ ಎಂದು ಸಮೀಕ್ಷೆಯ ಮಾಹಿತಿ ಹೊರ ಹಾಕುತ್ತಿದ್ದಂತೆ ಬಿಜೆಪಿಯವರು ಗೆಲುವಿನ ನಗೆ ಬೀರಲಾರಂಭಿಸಿದರೇ ಕಾಂಗ್ರೇಸ್ ನಲ್ಲಿ  ಅಭ್ಯರ್ಥಿಯನ್ನು ಬದಲಾಯಿಸಬೇಕೆಂದು ದಿಲ್ಲಿಯಲ್ಲಿ ಲಾಭಿ ಶುರುವಿಟ್ಟುಕೊಂಡಿರುವುದು ಸದ್ಯದಮಟ್ಟಿಗೆ ಹೊಸಬೆಳವಣಿಗೆ. ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಟಿ.ಡಿ.ರಾಜೇಗೌಡರೇ ಈ ಬಾರಿಯ ಅಭ್ಯರ್ಥಿ ಎಂದು ಮೊದಲ ಹಂತದಲ್ಲಿ ಆಯ್ಕೆಯಾಗಿದ್ದರೂ ಕ್ಷೇತ್ರದ ಶೃಂಗೇರಿ ಮತ್ತು ನರಾ..ಪುರದ ಕೆಲ ಮುಖಂಡರ ಬೆಂಬಲಿಗರು ಅಭ್ಯರ್ಥಿ ಬದಲಾಯಿಸಿ ಎಂಬ ಲಾಭಿ ಶುರುವಿಟ್ಟುಕೊಂಡಿರುವುದು ಸದ್ಯದ ಮಟ್ಟಿಗೆ ಹೊಸಬೆಳವಣಿಗೆ. ಇನ್ನೂ ರಾಜೇಗೌಡರು ವರ್ಷಕ್ಕೂ ಮುಂಚಿನಿಂದಲೇ ಪ್ರವಾಸ ಮಾಡುತ್ತಾ ಚುನಾವಣೆಗೆ ತಯಾರಿನೆಡೆಸಿದ್ದು ಸದ್ಯದ ಈ ಹೊಸ ಬೆಳವಣಿಗೆಗೆ ಯಾವ ರೀತಿ ಪ್ರತಿಕ್ರೀಯಿಸುತ್ತಾರೋ ಕಾದುನೋಡಬೇಕು. ಒಟ್ಟಾರೆ ಮಲೆನಾಡಿನಲ್ಲಿ ರಾಜಕೀಯ ನಿಧಾನವಾಗಿ ಅವರ್ನ ಬಿಟ್ ಇವರ್ನ ಬಿಟ್ ಅವರ್ಯಾರು ಎನ್ನುವ ಆಟದಂತಾಗಿದೆ.

No comments:

Post a Comment